<p><strong>ಕಲಬುರ್ಗಿ: </strong>‘ಸಾಹಿತಿ ಹನುಮಾಕ್ಷಿ ಗೋಗಿ ಅವರು ರಚಿಸಿದ ‘ಏವೂರ’ ಶಾಸನ ಕೃತಿಯು ವಿದ್ವತ್ಪೂರ್ಣವಾಗಿದೆ. ಇತಿಹಾಸ ಓದುಗರು ಹಾಗೂ ಸಾಮಾನ್ಯ ಜನರಿಗೂ ಅರ್ಥವಾಗುವಂಥ ಕೈಪಿಡಿ ಇದು’ ಎಂದು ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಟಿ.ಡಿ. ರಾಜಣ್ಣ ಹೇಳಿದರು.</p>.<p>ನಗರದಲ್ಲಿ ಶನಿವಾರಸಮಾನ ಮನಸ್ಕ ಸಾಹಿತ್ಯಾಸಕ್ತರ ಬಳಗದಿಂದ ಆಯೋಜಿಸಿದ್ದ ‘ಏವೂರ’ ಶಾಸನ ಪುಸ್ತಕ ಲೋಕಾರ್ಪಣೆ ಹಾಗೂಅಭಿನಂದನಾ ಸಮಾರಂಭದಲ್ಲಿ ಅವರು ಕೃತಿ ಪರಿಚಯಿಸಿದರು.</p>.<p>‘ಸ್ಥಳೀಯ ಚರಿತ್ರೆಯನ್ನು ಶಾಸನಗಳ ಹಿನ್ನೆಲೆಯಲ್ಲಿ ಈ ಕೃತಿ ಬರೆದಿದ್ದು, ಸಮರ್ಥವಾಗಿದೆ. ಇಂಥ ಸಂಶೋಧನಾ ಕೃತಿ ಹೊರತರುವುದು ತೀವ್ರ ಕಷ್ಟಕರ’ ಎಂದರು.</p>.<p>ಸಹಾಯಕ ಕೃಷಿ ನಿರ್ದೇಶಕಿ ಮಧುಮತಿ ಪಾಟೀಲ ಮಾತನಾಡಿ, ‘ಕಲ್ಯಾಣ ಕರ್ನಾಟಕ ಯಾವ ಕ್ಷೇತದಲ್ಲೂ ಹಿಂದೆ ಬಿದ್ದಿಲ್ಲ. ಸಾಂಸ್ಕೃತಿಕ, ಐತಿಹಾಸಿಕ ಹಾಗೂ ಸಂಗೀತದಿಂದ ಶ್ರೀಮಂತಿಕೆ ನಾಡು ಇದಾಗಿದೆ. ಇದರ ಇತಿಹಾಸದ ಮೇಲೆ ಬೆಳಕು ಚೆಲ್ಲಬೇಕಿದೆ’ ಎಂದರು.</p>.<p>ಸಾಹಿತಿ ಡಾ.ಸ್ವಾಮಿರಾವ್ ಕುಲಕರ್ಣಿ ಮಾತನಾಡಿ, ‘ಶಾಸನಗಳ ಕುರಿತು ಪುಸ್ತಕ ಬರೆಯುವುದು ಸಾಹಸದ ಕೆಲಸ. ಇದಕ್ಕೆ ತಾಳ್ಮೆ, ಐತಿಹಾಸಿಕ ಹಾಗೂ ಸಾಹಿತ್ಯದ ಜ್ಞಾನ ಅಪಾರವಾಗಿ ಬೇಕು’ ಎಂದರು.</p>.<p>ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ಅಭಿನಂದನಾ ನುಡಿ ಸಮರ್ಪಿಸಿದರು. ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ, ವಿನೋದಕುಮಾರ ಜನವರಿ ಇದ್ದರು.</p>.<p>ಬಳಗದ ಸಂಚಾಲಕ ಅರುಣ ಕುಲಕರ್ಣಿ ಸ್ವಾಗತಿಸಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಪ್ರಾಸ್ತಾವಿಕ ಮಾತನಾಡಿದರು. ಶಿವರಾಜ ಅಂಡಗಿ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ: </strong>‘ಸಾಹಿತಿ ಹನುಮಾಕ್ಷಿ ಗೋಗಿ ಅವರು ರಚಿಸಿದ ‘ಏವೂರ’ ಶಾಸನ ಕೃತಿಯು ವಿದ್ವತ್ಪೂರ್ಣವಾಗಿದೆ. ಇತಿಹಾಸ ಓದುಗರು ಹಾಗೂ ಸಾಮಾನ್ಯ ಜನರಿಗೂ ಅರ್ಥವಾಗುವಂಥ ಕೈಪಿಡಿ ಇದು’ ಎಂದು ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಟಿ.ಡಿ. ರಾಜಣ್ಣ ಹೇಳಿದರು.</p>.<p>ನಗರದಲ್ಲಿ ಶನಿವಾರಸಮಾನ ಮನಸ್ಕ ಸಾಹಿತ್ಯಾಸಕ್ತರ ಬಳಗದಿಂದ ಆಯೋಜಿಸಿದ್ದ ‘ಏವೂರ’ ಶಾಸನ ಪುಸ್ತಕ ಲೋಕಾರ್ಪಣೆ ಹಾಗೂಅಭಿನಂದನಾ ಸಮಾರಂಭದಲ್ಲಿ ಅವರು ಕೃತಿ ಪರಿಚಯಿಸಿದರು.</p>.<p>‘ಸ್ಥಳೀಯ ಚರಿತ್ರೆಯನ್ನು ಶಾಸನಗಳ ಹಿನ್ನೆಲೆಯಲ್ಲಿ ಈ ಕೃತಿ ಬರೆದಿದ್ದು, ಸಮರ್ಥವಾಗಿದೆ. ಇಂಥ ಸಂಶೋಧನಾ ಕೃತಿ ಹೊರತರುವುದು ತೀವ್ರ ಕಷ್ಟಕರ’ ಎಂದರು.</p>.<p>ಸಹಾಯಕ ಕೃಷಿ ನಿರ್ದೇಶಕಿ ಮಧುಮತಿ ಪಾಟೀಲ ಮಾತನಾಡಿ, ‘ಕಲ್ಯಾಣ ಕರ್ನಾಟಕ ಯಾವ ಕ್ಷೇತದಲ್ಲೂ ಹಿಂದೆ ಬಿದ್ದಿಲ್ಲ. ಸಾಂಸ್ಕೃತಿಕ, ಐತಿಹಾಸಿಕ ಹಾಗೂ ಸಂಗೀತದಿಂದ ಶ್ರೀಮಂತಿಕೆ ನಾಡು ಇದಾಗಿದೆ. ಇದರ ಇತಿಹಾಸದ ಮೇಲೆ ಬೆಳಕು ಚೆಲ್ಲಬೇಕಿದೆ’ ಎಂದರು.</p>.<p>ಸಾಹಿತಿ ಡಾ.ಸ್ವಾಮಿರಾವ್ ಕುಲಕರ್ಣಿ ಮಾತನಾಡಿ, ‘ಶಾಸನಗಳ ಕುರಿತು ಪುಸ್ತಕ ಬರೆಯುವುದು ಸಾಹಸದ ಕೆಲಸ. ಇದಕ್ಕೆ ತಾಳ್ಮೆ, ಐತಿಹಾಸಿಕ ಹಾಗೂ ಸಾಹಿತ್ಯದ ಜ್ಞಾನ ಅಪಾರವಾಗಿ ಬೇಕು’ ಎಂದರು.</p>.<p>ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ಅಭಿನಂದನಾ ನುಡಿ ಸಮರ್ಪಿಸಿದರು. ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ, ವಿನೋದಕುಮಾರ ಜನವರಿ ಇದ್ದರು.</p>.<p>ಬಳಗದ ಸಂಚಾಲಕ ಅರುಣ ಕುಲಕರ್ಣಿ ಸ್ವಾಗತಿಸಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಪ್ರಾಸ್ತಾವಿಕ ಮಾತನಾಡಿದರು. ಶಿವರಾಜ ಅಂಡಗಿ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>