ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಕಲ್ಲುಗಣಿಯಲ್ಲಿ ಬಿದ್ದು ಬಾಲಕ ಸಾವು

Last Updated 20 ಆಗಸ್ಟ್ 2021, 10:44 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯ ವಾಡಿ ಪಟ್ಟಣದ ಬಸವನಗುಡಿ ಬಡಾವಣೆಯ ಹೊರವಲಯದಲ್ಲಿ ಶುಕ್ರವಾರ ಕಲ್ಲುಗಣಿಯಲ್ಲಿ ಬಿದ್ದು ಎಂಟು ವರ್ಷದ ಬಾಲಕ ಮೃತಪಟ್ಟಿದ್ದಾನೆ.‌

ಮಿಥುನ್‌ ಜಾಧವ ಎನ್ನುವವರ ಪುತ್ರಮಂಗೇಶ ಮೃತಪಟ್ಟ ಬಾಲಕ. ಕಲ್ಲುಗಣಿಯಲ್ಲಿ ಕೆಲಸ ಮಾಡುತ್ತಿದ್ದ ಮಿಥುನ್‌ ಅವರು ತಮ್ಮೊಂದಿಗೆ ಪುತ್ರನನ್ನೂ ಕರೆದುಕೊಂಡು ಹೋಗಿದ್ದರು. ಆಳವಾಗಿ ತೆಗೆದ ಗಣಿ ಕಂದಕದಲ್ಲಿ ಮಳೆ ನೀರು ತುಂಬಿಕೊಂಡಿದೆ. ಅದರ ದಡದ ಮೇಲೆ ಬಾಲಕ ಆಟವಾಡುತ್ತಿದ್ದ. ಕೆಲಸಗಾರರು ಹಾಸುಗಲ್ಲೊಂದನ್ನು ಎಳೆದಾಗ ಅದರ ಪಕ್ಕದ ಕಲ್ಲೂ ಕುಸಿಯಿತು. ಅದರೊಂದಿಗೆ ಬಾಲಕ ಕೂಡ ನೀರಿನಲ್ಲಿ ಬಿದ್ದ. ತೀವ್ರ ಪೆಟ್ಟುಬಿದ್ದ ಕಾರಣ ಬಾಲಕ ಪ್ರಾಣ ಕಳೆದುಕೊಂಡ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಾಡಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT