ಮಿಥುನ್ ಜಾಧವ ಎನ್ನುವವರ ಪುತ್ರಮಂಗೇಶ ಮೃತಪಟ್ಟ ಬಾಲಕ. ಕಲ್ಲುಗಣಿಯಲ್ಲಿ ಕೆಲಸ ಮಾಡುತ್ತಿದ್ದ ಮಿಥುನ್ ಅವರು ತಮ್ಮೊಂದಿಗೆ ಪುತ್ರನನ್ನೂ ಕರೆದುಕೊಂಡು ಹೋಗಿದ್ದರು. ಆಳವಾಗಿ ತೆಗೆದ ಗಣಿ ಕಂದಕದಲ್ಲಿ ಮಳೆ ನೀರು ತುಂಬಿಕೊಂಡಿದೆ. ಅದರ ದಡದ ಮೇಲೆ ಬಾಲಕ ಆಟವಾಡುತ್ತಿದ್ದ. ಕೆಲಸಗಾರರು ಹಾಸುಗಲ್ಲೊಂದನ್ನು ಎಳೆದಾಗ ಅದರ ಪಕ್ಕದ ಕಲ್ಲೂ ಕುಸಿಯಿತು. ಅದರೊಂದಿಗೆ ಬಾಲಕ ಕೂಡ ನೀರಿನಲ್ಲಿ ಬಿದ್ದ. ತೀವ್ರ ಪೆಟ್ಟುಬಿದ್ದ ಕಾರಣ ಬಾಲಕ ಪ್ರಾಣ ಕಳೆದುಕೊಂಡ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.