ಯುಗಾದಿ ಹಬ್ಬ ಸೇರಿದಂತೆ ವಿವಿಧೆಡೆ ಜಾತ್ರೆ ಹಾಗೂ ರಂಜಾನ್ ಮಾಸದ ಆರಂಭದ ಕಾರಣ ಸಹಜವಾಗಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವರು. ಆದರೆ ಈ ಹಿಂದಿನ ಲಾಕ್ಡೌನ್ ದಂತೆ ಕಠಿಣ ಕಟ್ಟೆಚ್ಚೆರ ಕ್ರಮಗಳು ಮಹಾರಾಷ್ಟ್ರ ಸರ್ಕಾರ ತೆಗೆದುಕೊಂಡಿಲ್ಲ. ಜನದಟ್ಟಣೆ ಹಾಗೂ ಸಭೆ, ಸಮಾರಂಭ ಹಾಗೂ ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕಲಾಗಿದೆ. ಹೀಗಾಗಿ ಮೊದಲಿನಂತೆ ಕೂಲಿಕಾರ್ಮಿಕರು ವಲಸೆ ಬರುವದು ಆಗಲಾರದು ಎಂದು ನೆರೆಯ ವಾಗ್ದರಿಯ ಶಿಕ್ಷಕ ಶಿವಾನಂದ ಗೋಗಾಂವ ‘ಪ್ರಜಾವಾಣಿ’ಗೆ ತಿಳಿಸಿದರು.