ಅಕ್ಟೋಬರ್ 13ರಂದು ಕೇಂದ್ರ ಜವಳಿ ಸಚಿವ ಪಿಯೂಷ್ ಗೋಯಲ್ ಅವರಿಗೆ ಪ್ರಸ್ತಾವ ಸಲ್ಲಿಸಿರುವ ಬೊಮ್ಮಾಯಿ, ‘ಕಲಬುರಗಿ ತಾಲ್ಲೂಕಿನ ಫಿರೋಜಾಬಾದ್, ನದಿಸಿನ್ನೂರ, ಹೊನ್ನಕಿರಣಗಿ ಗ್ರಾಮಗಳ ವ್ಯಾಪ್ತಿಯಲ್ಲಿ ಜಮೀನು ಇದೆ. ಇದನ್ನು ಜವಳಿ ಪಾರ್ಕ್ ಸ್ಥಾಪನೆಗೆ ಸ್ವಾಧೀನ ಪಡಿಸಿಕೊಳ್ಳಲಾಗುವುದು. ಇದೇ ಗ್ರಾಮಗಳ ವ್ಯಾಪ್ತಿಯಲ್ಲಿ ಭೀಮಾ ನದಿ ನೀರು ಹರಿಯುವುದರಿಂದ ನೀರಿನ ಸೌಕರ್ಯವೂ ಸುಲಭವಾಗಿ ಸಿಗಲಿದೆ. ವಿದ್ಯುತ್ ಪೂರೈಕೆಗೂ ಯಾವುದೇ ಸಮಸ್ಯೆ ಇಲ್ಲ. ರಾಜ್ಯ ಸರ್ಕಾರ ಇಲ್ಲಿ ಪಾರ್ಕ್ ಸ್ಥಾಪನೆ ಮಾಡಲು ಉತ್ಸುಕವಾಗಿದೆ’ ಎಂದೂತಿಳಿಸಿದ್ದಾರೆ.