<p><strong>ಆಳಂದ:</strong> ‘ಶಾಲಾ ಚಟುವಟಿಕೆಗಳು ಸ್ಥಗಿತಗೊಂಡ ಕಾರಣ ಮಕ್ಕಳಲ್ಲಿ ಮೊಬೈಲ್ ಗೀಳು ಹೆಚ್ಚುತ್ತಿದೆ. ಅತಿಯಾದ ಮೊಬೈಲ್ ಬಳಕೆಯಿಂದ ಅವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿರುವುದು ಅಪಾಯಕಾರಿ’ ಎಂದು ಖಜೂರಿಯ ಮುರುಘೇಂದ್ರ ಕೋರಣೇಶ್ವರ ಸ್ವಾಮೀಜಿ ಹೇಳಿದರು.</p>.<p>ಪಟ್ಟಣದಲ್ಲಿ ಶನಿವಾರ ಕನ್ನಡ ಜಾನಪದ ಪರಿಷತ್ತು ಮತ್ತು ಭಾರತ ಸೇವಾದಳ ಸಹಯೋಗದಲ್ಲಿ ಸೇವಾದಳದ ಸಂಘಟಕ ಶಿವಪುತ್ರಪ್ಪ ಮೇತ್ರೆ ಪುಣ್ಯಸ್ಮರಣೋತ್ಸವ ಹಾಗೂ ಮಕ್ಕಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.</p>.<p>ತಾಲ್ಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ಅಪ್ಪಾಸಾಹೇಬ ತೀರ್ಥೆ ಮಾತನಾಡಿ, ‘ಶಿಕ್ಷಕರಾದ ಶಿವಪುತ್ರಪ್ಪ ಮೇತ್ರೆ ಅವರು ಆಳಂದ ತಾಲ್ಲೂಕಿನಲ್ಲಿ ಸೇವಾದಳ ಸಂಘಟನೆ ಬಲಪಡೆಸಲು ವಿಶೇಷವಾಗಿ ಶ್ರಮಿಸಿದರು. ಅವರ ಶಿಸ್ತು, ಸೇವಾ ಮನೋಭಾವ ಮಾದರಿ’ ಎಂದರು.</p>.<p>ಸೇವಾದಳದ ಜಿಲ್ಲಾ ಸಮಿತಿ ಸದಸ್ಯ ಸೂರ್ಯಕಾಂತ ತಟ್ಟಿ, ಸಂಪನ್ಮೂಲ ವ್ಯಕ್ತಿ ಚನ್ನಮಲ್ಲಯ್ಯ ಕಠಾರಿಮಠ , ರುಕ್ಮೀಣಿ ಸಂಗಾ ಮಾತನಾಡಿ, ‘ಮಕ್ಕಳಿಗೆ ಶಿಕ್ಷಣ, ಆರೋಗ್ಯದ ಕಾಳಜಿ ಜೊತೆಗೆ ಉತ್ತಮ ಮೌಲ್ಯಗಳು ಬೆಳೆಸುವುದು ಮುಖ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.</p>.<p>ಪ್ರಮುಖರಾದ ಸಿದ್ದಲಿಂಗ ಶಿವಪುತ್ರಪ್ಪ ಮೇತ್ರೆ ಅಧ್ಯಕ್ಷತೆ ವಹಿಸಿದ್ದರು. ಬಿ.ಕೆ.ವೈಷ್ಣವಿ, ವಿಠಲರಾವ ತಡಕಲೆ, ಚಂದ್ರಶೇಖರ ಜಂಗಲೆ, ಕಾಶಿನಾಥ ಜಮದಾರ, ಮಹಾಂತೇಶ ಸೋಮಾ, ಪ್ರಮೋದ ಪಂಚಾಳ, ಸಿದ್ದರಾಮ ಗೂಂಡೂರೆ, ಪೂಜಾ ಮೇತ್ರೆ, ಸೋಮು ಕಠಾರಿಮಠ, ಧರ್ಮರಾಯ ಕೊರಳ್ಳಿ, ದೀಪ್ತಿ ಮಡ್ಡೆ ಇದ್ದರು.</p>.<p>ಹಾಸ್ಯ ಕಲಾವಿದ ರಾಜಶೇಖರ ಹೆಬ್ಬಾಳ ಅವರಿಂದ ನಗೆಹಬ್ಬ ಹಾಗೂ ಜಾನಪದ ಗಾಯನ ಜರುಗಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಳಂದ:</strong> ‘ಶಾಲಾ ಚಟುವಟಿಕೆಗಳು ಸ್ಥಗಿತಗೊಂಡ ಕಾರಣ ಮಕ್ಕಳಲ್ಲಿ ಮೊಬೈಲ್ ಗೀಳು ಹೆಚ್ಚುತ್ತಿದೆ. ಅತಿಯಾದ ಮೊಬೈಲ್ ಬಳಕೆಯಿಂದ ಅವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿರುವುದು ಅಪಾಯಕಾರಿ’ ಎಂದು ಖಜೂರಿಯ ಮುರುಘೇಂದ್ರ ಕೋರಣೇಶ್ವರ ಸ್ವಾಮೀಜಿ ಹೇಳಿದರು.</p>.<p>ಪಟ್ಟಣದಲ್ಲಿ ಶನಿವಾರ ಕನ್ನಡ ಜಾನಪದ ಪರಿಷತ್ತು ಮತ್ತು ಭಾರತ ಸೇವಾದಳ ಸಹಯೋಗದಲ್ಲಿ ಸೇವಾದಳದ ಸಂಘಟಕ ಶಿವಪುತ್ರಪ್ಪ ಮೇತ್ರೆ ಪುಣ್ಯಸ್ಮರಣೋತ್ಸವ ಹಾಗೂ ಮಕ್ಕಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.</p>.<p>ತಾಲ್ಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ಅಪ್ಪಾಸಾಹೇಬ ತೀರ್ಥೆ ಮಾತನಾಡಿ, ‘ಶಿಕ್ಷಕರಾದ ಶಿವಪುತ್ರಪ್ಪ ಮೇತ್ರೆ ಅವರು ಆಳಂದ ತಾಲ್ಲೂಕಿನಲ್ಲಿ ಸೇವಾದಳ ಸಂಘಟನೆ ಬಲಪಡೆಸಲು ವಿಶೇಷವಾಗಿ ಶ್ರಮಿಸಿದರು. ಅವರ ಶಿಸ್ತು, ಸೇವಾ ಮನೋಭಾವ ಮಾದರಿ’ ಎಂದರು.</p>.<p>ಸೇವಾದಳದ ಜಿಲ್ಲಾ ಸಮಿತಿ ಸದಸ್ಯ ಸೂರ್ಯಕಾಂತ ತಟ್ಟಿ, ಸಂಪನ್ಮೂಲ ವ್ಯಕ್ತಿ ಚನ್ನಮಲ್ಲಯ್ಯ ಕಠಾರಿಮಠ , ರುಕ್ಮೀಣಿ ಸಂಗಾ ಮಾತನಾಡಿ, ‘ಮಕ್ಕಳಿಗೆ ಶಿಕ್ಷಣ, ಆರೋಗ್ಯದ ಕಾಳಜಿ ಜೊತೆಗೆ ಉತ್ತಮ ಮೌಲ್ಯಗಳು ಬೆಳೆಸುವುದು ಮುಖ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.</p>.<p>ಪ್ರಮುಖರಾದ ಸಿದ್ದಲಿಂಗ ಶಿವಪುತ್ರಪ್ಪ ಮೇತ್ರೆ ಅಧ್ಯಕ್ಷತೆ ವಹಿಸಿದ್ದರು. ಬಿ.ಕೆ.ವೈಷ್ಣವಿ, ವಿಠಲರಾವ ತಡಕಲೆ, ಚಂದ್ರಶೇಖರ ಜಂಗಲೆ, ಕಾಶಿನಾಥ ಜಮದಾರ, ಮಹಾಂತೇಶ ಸೋಮಾ, ಪ್ರಮೋದ ಪಂಚಾಳ, ಸಿದ್ದರಾಮ ಗೂಂಡೂರೆ, ಪೂಜಾ ಮೇತ್ರೆ, ಸೋಮು ಕಠಾರಿಮಠ, ಧರ್ಮರಾಯ ಕೊರಳ್ಳಿ, ದೀಪ್ತಿ ಮಡ್ಡೆ ಇದ್ದರು.</p>.<p>ಹಾಸ್ಯ ಕಲಾವಿದ ರಾಜಶೇಖರ ಹೆಬ್ಬಾಳ ಅವರಿಂದ ನಗೆಹಬ್ಬ ಹಾಗೂ ಜಾನಪದ ಗಾಯನ ಜರುಗಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>