<p><strong>ಚಿಂಚೋಳಿ</strong>: ರೊಟ್ಟಿ ಪ್ರಿಯರ ಹೊಟ್ಟೆ ತುಂಬಿಸುವ ಜೋಳ ಬೇಸಾಯ ತಾಲ್ಲೂಕಿನಲ್ಲಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ.</p>.<p>ಒಂದೆಡೆ ಜೋಳದ ಗೂಡು ಮುರಿಯುವ ಕಾರ್ಮಿಕರ ಕೊರತೆಯಿಂದ ರೈತರು ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಜೋಳ ಬಿತ್ತನೆಯಲ್ಲಿ ತೊಡಗಿದರೆ, ಜೋಳದ ರಾಶಿಯ ನಂತರ (ಮೇವು) ಕಣಕಿ ತಿನ್ನುವ ಜಾನುವಾರುಗಳ ಸಂಖ್ಯೆಯೂ ಕ್ಷೀಣಿಸುತ್ತಿರುವುದು ಕಳವಳಕಾರಿ.</p>.<p>ಸದ್ಯ ರೈತರ ಹೊಲದಲ್ಲಿ ಜೋಳದ ಬೆಳೆ ಕೊಯ್ಲಿಗೆ ಬಂದಿದೆ. ಎರಡು ವಾರಗಳಲ್ಲಿ ಜೋಳದ ರಾಶಿಯೂ ಮುಗಿಯುವ ಸಾಧ್ಯತೆಯಿದೆ.</p>.<p>ಜೋಳ ಜನರಿಂದಲೇ ರಾಶಿ ಮಾಡಬೇಕು. ಜೋಳದ ದಂಟುಗಳನ್ನು ಕಿತ್ತು ಸೂಡು ಕಟ್ಟಿ ತೆನೆಗಳನ್ನು ಮುರಿದು ಕಣದಲ್ಲಿ ಹಾಕಿ ಹಂತಿ ಕಟ್ಟುವುದು ಸಾಮಾನ್ಯವಾದರೆ, ಈಗ ಆಧುನಿಕತೆಯ ಭರಾಟೆಯಲ್ಲಿ ಹಂತಿಗಳು ಮಾಯವಾಗಿವೆ. ಹಂತಿ ಹೂಡಲು ಎತ್ತುಗಳೇ ಇಲ್ಲದಂತಾಗುತ್ತಿದೆ. ಬಹುತೇಕ ಕೃಷಿ ಈಗ ಟ್ರ್ಯಾಕ್ಟರ್ ಅವಲಂಬಿಸುತ್ತಿದೆ.</p>.<p>ಹೆಚ್ಚಿನ ಜನರು ಜೋಳ ಬೇಸಾಯಕ್ಕೆ ನಿರಾಸಕ್ತಿ ತೋರಿಸುತ್ತಿದ್ದಾರೆ. ತಾಲ್ಲೂಕಿನಲ್ಲಿ ಮಾನದಂಡಿ, ಕಾಟಿ, ಕೋಡಮುರಕಿ, ಬಸವಣ್ಣನ ಮಾರಿ, ಅಳ್ಳಿನ ಜೋಳ, ಹೋಳಿ ಜೋಳ ಹೀಗೆ ವಿವಿಧ ಪ್ರಕಾರದ ಜೋಳ ಬೇಸಾಯ ಮಾಡಲಾಗುತ್ತಿದೆ.</p>.<p>ಹೆಚ್ಚಿನ ಪ್ರಮಾಣದಲ್ಲಿ ಮಾನದಂಡಿ ಜೋಳ ಬೇಸಾಯವಿದ್ದು ಉಳಿದ ಜೋಳದಲ್ಲಿ ಕಾಟಿ, ಕೋಡಮುರಕಿ ಹೊರತುಪಡಿಸಿದರೆ ಹೋಳಿಜೋಳ(ಕಡುಬು), ಅಳ್ಳಿನ ಜೋಳ(ನಾಗಪಂಚಮಿ ಅಳ್ಳು ತಯಾರಿಸುವ) ಜೋಳ ಬೇಸಾಯ ಒಂದೆರಡು ಸಾಲು ಮಾತ್ರ ರೈತರು ತಮ್ಮ ಹೊಲಗಳಲ್ಲಿ ಬಿತ್ತನೆ ನಡೆಸುವುದು ರೂಢಿ.</p>.<p>ತಾಲ್ಲೂಕಿನ ಚಂದ್ರಂಪಳ್ಳಿ ನೀರಾವರಿ ಯೋಜನೆ ಅಚ್ಚುಕಟ್ಟು ಪ್ರದೇಶದಲ್ಲಿ ಜೋಳದ ಬೇಸಾಯ ಅಧಿಕ ಪ್ರಮಾಣದಲ್ಲಿ ಕಾಣ ಸಿಗುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಜೋಳ ಬೇಸಾಯ ಕ್ಷೇತ್ರ ಕ್ಷೀಣಿಸುತ್ತಿದೆ.</p>.<p>ಹಿಂದಿನ ದಿನಗಳಲ್ಲಿ ರೈತರು ಒಂದು ವರ್ಷ ದ್ವಿದಳ ಧಾನ್ಯ ಮತ್ತೊಂದು ವರ್ಷ ಏಕದಳ ಧಾನ್ಯ ಬೇಸಾಯ ಮಾಡುವ ಮೂಲಕ ಭೂಮಿಯ ಆರೋಗ್ಯ ಕಾಪಾಡುತ್ತಿದ್ದರು. ಆದರೆ ಈಗ ಹೆಚ್ಚಿನ ರೈತರು ತೊಗರಿ ಮಾತ್ರ ಅವಲಂಬಿಸುತ್ತಿರುವುದು ಮಣ್ಣಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.</p>.<div><blockquote>ವರ್ಷದಿಂದ ವರ್ಷಕ್ಕೆ ಜೋಳದ ಬೇಸಾಯ ಕ್ಷೇತ್ರ ಕ್ಷೀಣಿಸುತ್ತಿರುವುದು ನೋಡಿದರೆ ಮುಂದಿನ ದಿನಗಳಲ್ಲಿ ಜೋಳಕ್ಕೆ ಹೆಚ್ಚಿನ ಬೆಲೆ ಬರುವುದರಲ್ಲಿ ಅನುಮಾನವಿಲ್ಲ</blockquote><span class="attribution">ವೀರಪ್ಪ ನಾಯಕ ಕೃಷಿಕ ತಿರುಮಲಾಪುರ</span></div>.<div><blockquote>ಹಿಂದಿನ ಮೂರು ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ವರ್ಷ ಜೋಳದ ಬೇಸಾಯ ಕ್ಷೇತ್ರ ಕಡಿಮೆಯಾಗಿದೆ. ಇದಕ್ಕೆ ಕಾರ್ಮಿಕರ ಕೊರತೆಯೇ ಕಾರಣ</blockquote><span class="attribution">ವೀರಶೆಟ್ಟಿ ರಾಠೋಡ್ ಸಹಾಯಕ ಕೃಷಿ ನಿರ್ದೇಶಕ ಚಿಂಚೋಳಿ</span></div>.<blockquote>ತಾಲ್ಲೂಕಿನಲ್ಲಿ ಜೋಳ ಬೇಸಾಯ (ಹೆಕ್ಟೇರ್ಗಳಲ್ಲಿ) ವರ್ಷ;ಗುರಿ;ಸಾಧನೆ 2019-20;10000;40002022-23;8000;40172023-24;7500;48742024-25;6500;4000</blockquote>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂಚೋಳಿ</strong>: ರೊಟ್ಟಿ ಪ್ರಿಯರ ಹೊಟ್ಟೆ ತುಂಬಿಸುವ ಜೋಳ ಬೇಸಾಯ ತಾಲ್ಲೂಕಿನಲ್ಲಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ.</p>.<p>ಒಂದೆಡೆ ಜೋಳದ ಗೂಡು ಮುರಿಯುವ ಕಾರ್ಮಿಕರ ಕೊರತೆಯಿಂದ ರೈತರು ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಜೋಳ ಬಿತ್ತನೆಯಲ್ಲಿ ತೊಡಗಿದರೆ, ಜೋಳದ ರಾಶಿಯ ನಂತರ (ಮೇವು) ಕಣಕಿ ತಿನ್ನುವ ಜಾನುವಾರುಗಳ ಸಂಖ್ಯೆಯೂ ಕ್ಷೀಣಿಸುತ್ತಿರುವುದು ಕಳವಳಕಾರಿ.</p>.<p>ಸದ್ಯ ರೈತರ ಹೊಲದಲ್ಲಿ ಜೋಳದ ಬೆಳೆ ಕೊಯ್ಲಿಗೆ ಬಂದಿದೆ. ಎರಡು ವಾರಗಳಲ್ಲಿ ಜೋಳದ ರಾಶಿಯೂ ಮುಗಿಯುವ ಸಾಧ್ಯತೆಯಿದೆ.</p>.<p>ಜೋಳ ಜನರಿಂದಲೇ ರಾಶಿ ಮಾಡಬೇಕು. ಜೋಳದ ದಂಟುಗಳನ್ನು ಕಿತ್ತು ಸೂಡು ಕಟ್ಟಿ ತೆನೆಗಳನ್ನು ಮುರಿದು ಕಣದಲ್ಲಿ ಹಾಕಿ ಹಂತಿ ಕಟ್ಟುವುದು ಸಾಮಾನ್ಯವಾದರೆ, ಈಗ ಆಧುನಿಕತೆಯ ಭರಾಟೆಯಲ್ಲಿ ಹಂತಿಗಳು ಮಾಯವಾಗಿವೆ. ಹಂತಿ ಹೂಡಲು ಎತ್ತುಗಳೇ ಇಲ್ಲದಂತಾಗುತ್ತಿದೆ. ಬಹುತೇಕ ಕೃಷಿ ಈಗ ಟ್ರ್ಯಾಕ್ಟರ್ ಅವಲಂಬಿಸುತ್ತಿದೆ.</p>.<p>ಹೆಚ್ಚಿನ ಜನರು ಜೋಳ ಬೇಸಾಯಕ್ಕೆ ನಿರಾಸಕ್ತಿ ತೋರಿಸುತ್ತಿದ್ದಾರೆ. ತಾಲ್ಲೂಕಿನಲ್ಲಿ ಮಾನದಂಡಿ, ಕಾಟಿ, ಕೋಡಮುರಕಿ, ಬಸವಣ್ಣನ ಮಾರಿ, ಅಳ್ಳಿನ ಜೋಳ, ಹೋಳಿ ಜೋಳ ಹೀಗೆ ವಿವಿಧ ಪ್ರಕಾರದ ಜೋಳ ಬೇಸಾಯ ಮಾಡಲಾಗುತ್ತಿದೆ.</p>.<p>ಹೆಚ್ಚಿನ ಪ್ರಮಾಣದಲ್ಲಿ ಮಾನದಂಡಿ ಜೋಳ ಬೇಸಾಯವಿದ್ದು ಉಳಿದ ಜೋಳದಲ್ಲಿ ಕಾಟಿ, ಕೋಡಮುರಕಿ ಹೊರತುಪಡಿಸಿದರೆ ಹೋಳಿಜೋಳ(ಕಡುಬು), ಅಳ್ಳಿನ ಜೋಳ(ನಾಗಪಂಚಮಿ ಅಳ್ಳು ತಯಾರಿಸುವ) ಜೋಳ ಬೇಸಾಯ ಒಂದೆರಡು ಸಾಲು ಮಾತ್ರ ರೈತರು ತಮ್ಮ ಹೊಲಗಳಲ್ಲಿ ಬಿತ್ತನೆ ನಡೆಸುವುದು ರೂಢಿ.</p>.<p>ತಾಲ್ಲೂಕಿನ ಚಂದ್ರಂಪಳ್ಳಿ ನೀರಾವರಿ ಯೋಜನೆ ಅಚ್ಚುಕಟ್ಟು ಪ್ರದೇಶದಲ್ಲಿ ಜೋಳದ ಬೇಸಾಯ ಅಧಿಕ ಪ್ರಮಾಣದಲ್ಲಿ ಕಾಣ ಸಿಗುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಜೋಳ ಬೇಸಾಯ ಕ್ಷೇತ್ರ ಕ್ಷೀಣಿಸುತ್ತಿದೆ.</p>.<p>ಹಿಂದಿನ ದಿನಗಳಲ್ಲಿ ರೈತರು ಒಂದು ವರ್ಷ ದ್ವಿದಳ ಧಾನ್ಯ ಮತ್ತೊಂದು ವರ್ಷ ಏಕದಳ ಧಾನ್ಯ ಬೇಸಾಯ ಮಾಡುವ ಮೂಲಕ ಭೂಮಿಯ ಆರೋಗ್ಯ ಕಾಪಾಡುತ್ತಿದ್ದರು. ಆದರೆ ಈಗ ಹೆಚ್ಚಿನ ರೈತರು ತೊಗರಿ ಮಾತ್ರ ಅವಲಂಬಿಸುತ್ತಿರುವುದು ಮಣ್ಣಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.</p>.<div><blockquote>ವರ್ಷದಿಂದ ವರ್ಷಕ್ಕೆ ಜೋಳದ ಬೇಸಾಯ ಕ್ಷೇತ್ರ ಕ್ಷೀಣಿಸುತ್ತಿರುವುದು ನೋಡಿದರೆ ಮುಂದಿನ ದಿನಗಳಲ್ಲಿ ಜೋಳಕ್ಕೆ ಹೆಚ್ಚಿನ ಬೆಲೆ ಬರುವುದರಲ್ಲಿ ಅನುಮಾನವಿಲ್ಲ</blockquote><span class="attribution">ವೀರಪ್ಪ ನಾಯಕ ಕೃಷಿಕ ತಿರುಮಲಾಪುರ</span></div>.<div><blockquote>ಹಿಂದಿನ ಮೂರು ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ವರ್ಷ ಜೋಳದ ಬೇಸಾಯ ಕ್ಷೇತ್ರ ಕಡಿಮೆಯಾಗಿದೆ. ಇದಕ್ಕೆ ಕಾರ್ಮಿಕರ ಕೊರತೆಯೇ ಕಾರಣ</blockquote><span class="attribution">ವೀರಶೆಟ್ಟಿ ರಾಠೋಡ್ ಸಹಾಯಕ ಕೃಷಿ ನಿರ್ದೇಶಕ ಚಿಂಚೋಳಿ</span></div>.<blockquote>ತಾಲ್ಲೂಕಿನಲ್ಲಿ ಜೋಳ ಬೇಸಾಯ (ಹೆಕ್ಟೇರ್ಗಳಲ್ಲಿ) ವರ್ಷ;ಗುರಿ;ಸಾಧನೆ 2019-20;10000;40002022-23;8000;40172023-24;7500;48742024-25;6500;4000</blockquote>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>