ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ, ‘ಶೌಚಾಲಯದಲ್ಲಿ ಬಿದ್ದು ಮೃತಪಟ್ಟ ವ್ಯಕ್ತಿಗೆ ಸರಿಯಾದ ಚಿಕಿತ್ಸೆ ಕೊಡಲಾಗುತ್ತಿತ್ತು. ಅವರು ಶೌಚಾಲಯದಲ್ಲಿ ಬಿದ್ದು ಮೃತಪಟ್ಟ ಕೆಲ ಸಮಯದ ನಂತರ ಸಿಬ್ಬಂದಿ ನೋಡಿ ಮಾಹಿತಿ ನೀಡಿದ್ದಾರೆ. ತಕ್ಷಣ ಅವರಿಗೆ ಚಿಕಿತ್ಸೆ ನೀಡಲು ವೈದ್ಯರು ಧಾವಿಸಿದರು. ಆದರೂ ಪ್ರಯೋಜನವಾಗಲಿಲ್ಲ. ಇದರಲ್ಲಿ ಸಿಬ್ಬಂದಿಯ ನಿರ್ಲಕ್ಷ್ಯ ಏನೂ ಇಲ್ಲ. ಕೆಲವರಲ್ಲಿ ಆಮ್ಲಜನಕದ ಪ್ರಮಾಣ ಏಕಾಏಕಿ ಕುಸಿತ ಕಾಣುತ್ತದೆ. ಇದನ್ನು ‘ಟ್ಯಾಂಬ್ರೋ ಎಂಬಾಲಿಸಂ’ ಎಂದು ಹೇಳುತ್ತೇವೆ. ಶೌಚಾಲಯದಲ್ಲಿ ಮೃತಪಟ್ಟ ವ್ಯಕ್ತಿಯ ಸಾವಿಗೆ ಇದೇ ಕಾರಣ’ ಎಂದು ಪ್ರತಿಕ್ರಿಯಿಸಿದರು.