‘ಅಕ್ಷರ ಆವಿಷ್ಕಾರ ಅಂಗನವಾಡಿ ಮುಚ್ಚಿಸುತ್ತದೆ’
‘ಅಕ್ಷರ ಆವಿಷ್ಕಾರದ ಯೋಜನೆ ಬಗ್ಗೆ ನಾವು ಏನೂ ಹೇಳದೇ ಅಧಿಕಾರಿಗಳು ಜಾರಿ ಮಾಡುತ್ತಿದ್ದಾರೆ. ಇದು ಅಂಗನವಾಡಿ ಕಾರ್ಯಕರ್ತೆಯರನ್ನು ಬೀದಿಗೆ ತರುತ್ತದೆ. ಅಂಗನವಾಡಿಯವರಿಗೆ ದ್ರೋಹ ಬಗೆಯುವುದು ಬೇಡ. ಅಂಗನವಾಡಿಯವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಈ ಕುರಿತು ಮಾತುಕತೆ ನಡೆಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಿಗೆ ನಾನು ಮನವಿ ಮಾಡುತ್ತೇನೆ’ ಎಂದು ಬಿ.ಆರ್.ಪಾಟೀಲ ಹೇಳಿದರು. ‘ಕೆಕೆಆರ್ಡಿಬಿ ಅನುದಾನ ಬಳಸಿ ನಮ್ಮ ಭಾಗದಲ್ಲೇ ಅಕ್ಷರ ಆವಿಷ್ಕಾರ ಯೋಜನೆ ಜಾರಿಗೆ ತರುವ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಪುನರ್ ಪರಿಶೀಲನೆ ಮಾಡಬೇಕು. ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಅದಕ್ಕೆ ಐತಿಹಾಸಿಕ ಕಾರಣಗಳಿವೆ. ನಮ್ಮ ಭಾಗದ ಎಲ್ಲ ಶಾಸಕರು ಪಕ್ಷಾತೀತವಾಗಿ ಸೇರಿ ಈ ಬಗ್ಗೆ ಚಿಂತಿಸಬೇಕು’ ಎಂದು ಅವರು ಹೇಳಿದರು.