‘ಸ್ಪರ್ಧೆಯಲ್ಲಿ ದಾಸರ ಕೀರ್ತನೆಗಳನ್ನು ಮಾತ್ರ ಹಾಡಲು ಅವಕಾಶವಿದೆ. ಶ್ರೀಪಾದರಾಜರು, ವಾದಿರಾಜರು, ಕನಕದಾಸರು, ವಿಜಯದಾಸರು, ಗೋಪಾಲದಾಸರು, ಪ್ರಾಣೇಶದಾಸರು, ವ್ಯಾಸರಾಜರು, ಪುರಂದರದಾಸರು, ಪ್ರಸನ್ನ ವೆಂಕಟದಾಸರು, ವ್ಯಾಸ ವಿಠಲದಾಸರು, ಜಗನ್ನಾಥ ದಾಸರ ಕೀರ್ತನೆಗಳನ್ನು ಹಾಡಬಹುದು. ಸಂಗೀತ ಕ್ಷೇತ್ರದ ಪ್ರಮಾಣಪತ್ರ ಇದ್ದವರಿಗೆ ಆದ್ಯತೆ ನೀಡಲಾಗುವುದು. ಆದರೆ, ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಯಾವುದೇ ಸಂಗೀತ ತರಬೇತಿ ಪಡೆದಿರಬೇಕೆಂಬ ನಿಯಮ ಇಲ್ಲ. ಶ್ರುತಿ, ರಾಗ, ತಾಳ, ಶಬ್ದಸ್ಪಷ್ಟತೆ ಹಾಗೂ ಸಾಹಿತ್ಯ ಹೀಗೆ ಎಲ್ಲ ಆಯಾಮಗಳನ್ನೂ ಗಾಯಕರನ್ನು ಜಡ್ಜ್ ಮಾಡಲಾಗುತ್ತದೆ’ ಎಂದೂ ಅವರು ಮಾಹಿತಿ ನೀಡಿದರು.