<p><strong>ಕಲಬುರ್ಗಿ:</strong> ‘ಮಲ್ಲಿಕಾರ್ಜುನ ಖರ್ಗೆ ಅವರ ಸೋಲಿಗೆ ಆರ್ಎಸ್ಎಸ್, ಬಿಜೆಪಿಯ ಕುತಂತ್ರವೇ ಕಾರಣ’ ಎಂದು ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.</p>.<p>ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಖರ್ಗೆ ಅವರ ಸೋಲಿನಿಂದ ಎಷ್ಟು ಅನ್ಯಾಯವಾಗಿದೆ ಎಂಬುದು ಈ ಭಾಗದ ಜನರಿಗೆ ಗೊತ್ತಾಗಿದೆ. ಅವರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಜನರು ಈಗಲೂ ನೆನೆಸುತ್ತಾರೆ. ಆದರೆ, ಕಟೀಲ್ ಅವರ ಹೇಳಿಕೆ ಕೀಳುಮಟ್ಟದ್ದಾಗಿದೆ. ಇದು ಅವರ ಸಂಸ್ಕೃತಿಯನ್ನು ತಿಳಿಸುತ್ತದೆ’ ಎಂದರು.</p>.<p>‘ಖರ್ಗೆ ಅವರು ರಾಜ್ಯ ಮತ್ತು ಕೇಂದ್ರದಲ್ಲಿ ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಸಂವಿಧಾನದ 371 (ಜೆ) ಕಾಯ್ದೆಗೆ ತಿದ್ದುಪಡಿ, ಇಎಸ್ಐ ಆಸ್ಪತ್ರೆ, ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆ ಖರ್ಗೆ ಅವರ ಅವಧಿಯಲ್ಲಿ ಆಗಿವೆ. ಇವು ವಿಷಕಾರಿ ಕೆಲಸಗಳೇ’ ಎಂದು ಪ್ರಶ್ನಿಸಿದರು.</p>.<p>‘ಖರ್ಗೆ ಅವರು ಸಚಿವರಾಗಿದ್ದಾಗ ಮಂಜೂರಾಗಿದ್ದ ರೈಲ್ವೆ ವಿಭಾಗೀಯ ಕಚೇರಿ ರದ್ದಾಯಿತು. ಜವಳಿ ಪಾರ್ಕ್ ಮೈಸೂರಿಗೆ ಸ್ಥಳಾಂತರವಾಯಿತು. ನಿಮ್ಜ್ ರದ್ದುಪಡಿಸಲಾಯಿತು. ಈ ಬಗ್ಗೆ ಯಾರೂ ಕೇಳುತ್ತಿಲ್ಲ. ಇದನ್ನು ಕೇಳಬೇಕಾದ ಸಂಸದರು ಸಂಸತ್ನಲ್ಲಿ ನಿದ್ದೆ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.</p>.<p>‘ಯೋಗ್ಯತೆ ಇಲ್ಲದವರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಇಂತಹ ಮೂರ್ಖತನದ ಹೇಳಿಕೆ ನೀಡುತ್ತಾರೆ. ಕಟೀಲ್ ಅವರು ನಾಲಿಗೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು’ ಎಂದು ಎಚ್ಚರಿಸಿದರು.</p>.<p>‘ಕಾಂಗ್ರೆಸ್ನವರು ವಿಷಕಾರಿ ಕೆಲಸ ಮಾಡಿಲ್ಲ. ರಾಜ್ಯದಲ್ಲಿ ಬಿಜೆಪಿಯವರಿಂದ ಆಗಿರುವ ಸಿ.ಡಿ ಪ್ರಕರಣ ವಿಷಕಾರಿ ಕೆಲಸ. ಬಿಜೆಪಿ ಅಧಿಕಾರಕ್ಕೆ ಬಂದಾಗ ಪ್ರಜಾಪ್ರಭುತ್ವ, ರಾಜ್ಯದ ಅಭಿವೃದ್ಧಿಗೆ ಮಾರಕವಾಗುವಂತಹ ವಿಷಕಾರಿ ಕೆಲಸಗಳನ್ನೇ ಮಾಡಿದೆ. ಇವರ ಅವಧಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ’ ಎಂದು ಆರೋಪಿಸಿದರು.</p>.<p>‘ಈಶ್ವರಪ್ಪ ಅವರು ಮುಖ್ಯಮಂತ್ರಿ ವಿರುದ್ಧ ಸ್ವಜನಪಕ್ಷಪಾತದ ಆರೋಪ ಮಾಡಿದ್ದಾರೆ. ಅವರಿಬ್ಬರ ನಡುವೆ ಪರ್ಸೆಂಟೇಜ್ ಜಗಳ ನಡೆಯುತ್ತಿದೆ’ ಎಂದು ದೂರಿದರು.</p>.<p>ಕಾಂಗ್ರೆಸ್ ಮುಖಂಡ ಬಿ.ಆರ್.ಪಾಟೀಲ ಮಾತನಾಡಿ,‘ಖರ್ಗೆ ಅವರ ಹೇಳಿಕೆಗೆ ನಾವು ಬದ್ಧರಾಗಿದ್ದೇವೆ. ವಿಷಜಂತುಗಳಿಂದ ತುಂಬಿಕೊಂಡಿರುವ ಆರ್ಎಸ್ಎಸ್ ದೇಶವನ್ನು ಹಾಳು ಮಾಡಿರುವುದನ್ನು ನೋಡಿ ಖರ್ಗೆ ಅವರು ನೋವಿನಿಂದ ಈ ಹೇಳಿಕೆ ನೀಡಿದ್ದಾರೆ. ಅವರು ವೈಯಕ್ತಿಕವಾಗಿ ಯಾರ ಬಗ್ಗೆಯೂ ದ್ವೇಷದಿಂದ ಹೇಳಿಕೆ ನೀಡಿಲ್ಲ’ ಎಂದರು.</p>.<p>‘ಒಂದು ಬಾರಿ ಸೋತಿದ್ದಕ್ಕೆ ಖರ್ಗೆ ಅವರು ವಿಷಕಾರಿ ವ್ಯಕ್ತಿತ್ವದವರು ಎಂದು ಹೇಳುವುದಾದರೆ ಸೋಲು ಕಂಡಿದ್ದ ವಾಜಪೇಯಿ, ಅಡ್ವಾಣಿ ಅವರೂ ವಿಷಕಾರಿಯೇ. ಈ ಬಗ್ಗೆ ಕಟೀಲ್ ಅವರು ಕಲಬುರ್ಗಿಗೆ ಬಂದು ಸ್ಪಷ್ಟೀಕರಣ ನೀಡಬೇಕು. ಅಲ್ಲಿಯವರೆಗೆ ನಮ್ಮ ವೈಚಾರಿಕ ಹೋರಾಟವನ್ನು ಮುಂದುವರಿಸುತ್ತೇವೆ’ ಎಂದು ಹೇಳಿದರು.</p>.<p>ರಾಜ್ಯಸಭೆ ಮಾಜಿ ಸದಸ್ಯ ಕೆ.ಬಿ.ಶಾಣಪ್ಪ ಮಾತನಾಡಿ,ದೊಡ್ಡ ನಾಯಕರ ಬಗ್ಗೆ ಮಾತನಾಡುವಾಗ ಎಚ್ಚರದಿಂದ ಇರಬೇಕು. ಖರ್ಗೆ ಸೋಲಿಗೆ ಮೋದಿಯೂ ಕಾರಣ. ಅಲ್ಲದೆ, ಸೋಲಿಗೆ ನಮ್ಮಲ್ಲಿಯೂ ಕಾರಣಗಳಿವೆ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.</p>.<p>ಶಾಸಕಿ ಖನೀಜ್ ಫಾತಿಮಾ, ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ:</strong> ‘ಮಲ್ಲಿಕಾರ್ಜುನ ಖರ್ಗೆ ಅವರ ಸೋಲಿಗೆ ಆರ್ಎಸ್ಎಸ್, ಬಿಜೆಪಿಯ ಕುತಂತ್ರವೇ ಕಾರಣ’ ಎಂದು ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.</p>.<p>ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಖರ್ಗೆ ಅವರ ಸೋಲಿನಿಂದ ಎಷ್ಟು ಅನ್ಯಾಯವಾಗಿದೆ ಎಂಬುದು ಈ ಭಾಗದ ಜನರಿಗೆ ಗೊತ್ತಾಗಿದೆ. ಅವರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಜನರು ಈಗಲೂ ನೆನೆಸುತ್ತಾರೆ. ಆದರೆ, ಕಟೀಲ್ ಅವರ ಹೇಳಿಕೆ ಕೀಳುಮಟ್ಟದ್ದಾಗಿದೆ. ಇದು ಅವರ ಸಂಸ್ಕೃತಿಯನ್ನು ತಿಳಿಸುತ್ತದೆ’ ಎಂದರು.</p>.<p>‘ಖರ್ಗೆ ಅವರು ರಾಜ್ಯ ಮತ್ತು ಕೇಂದ್ರದಲ್ಲಿ ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಸಂವಿಧಾನದ 371 (ಜೆ) ಕಾಯ್ದೆಗೆ ತಿದ್ದುಪಡಿ, ಇಎಸ್ಐ ಆಸ್ಪತ್ರೆ, ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆ ಖರ್ಗೆ ಅವರ ಅವಧಿಯಲ್ಲಿ ಆಗಿವೆ. ಇವು ವಿಷಕಾರಿ ಕೆಲಸಗಳೇ’ ಎಂದು ಪ್ರಶ್ನಿಸಿದರು.</p>.<p>‘ಖರ್ಗೆ ಅವರು ಸಚಿವರಾಗಿದ್ದಾಗ ಮಂಜೂರಾಗಿದ್ದ ರೈಲ್ವೆ ವಿಭಾಗೀಯ ಕಚೇರಿ ರದ್ದಾಯಿತು. ಜವಳಿ ಪಾರ್ಕ್ ಮೈಸೂರಿಗೆ ಸ್ಥಳಾಂತರವಾಯಿತು. ನಿಮ್ಜ್ ರದ್ದುಪಡಿಸಲಾಯಿತು. ಈ ಬಗ್ಗೆ ಯಾರೂ ಕೇಳುತ್ತಿಲ್ಲ. ಇದನ್ನು ಕೇಳಬೇಕಾದ ಸಂಸದರು ಸಂಸತ್ನಲ್ಲಿ ನಿದ್ದೆ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.</p>.<p>‘ಯೋಗ್ಯತೆ ಇಲ್ಲದವರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಇಂತಹ ಮೂರ್ಖತನದ ಹೇಳಿಕೆ ನೀಡುತ್ತಾರೆ. ಕಟೀಲ್ ಅವರು ನಾಲಿಗೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು’ ಎಂದು ಎಚ್ಚರಿಸಿದರು.</p>.<p>‘ಕಾಂಗ್ರೆಸ್ನವರು ವಿಷಕಾರಿ ಕೆಲಸ ಮಾಡಿಲ್ಲ. ರಾಜ್ಯದಲ್ಲಿ ಬಿಜೆಪಿಯವರಿಂದ ಆಗಿರುವ ಸಿ.ಡಿ ಪ್ರಕರಣ ವಿಷಕಾರಿ ಕೆಲಸ. ಬಿಜೆಪಿ ಅಧಿಕಾರಕ್ಕೆ ಬಂದಾಗ ಪ್ರಜಾಪ್ರಭುತ್ವ, ರಾಜ್ಯದ ಅಭಿವೃದ್ಧಿಗೆ ಮಾರಕವಾಗುವಂತಹ ವಿಷಕಾರಿ ಕೆಲಸಗಳನ್ನೇ ಮಾಡಿದೆ. ಇವರ ಅವಧಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ’ ಎಂದು ಆರೋಪಿಸಿದರು.</p>.<p>‘ಈಶ್ವರಪ್ಪ ಅವರು ಮುಖ್ಯಮಂತ್ರಿ ವಿರುದ್ಧ ಸ್ವಜನಪಕ್ಷಪಾತದ ಆರೋಪ ಮಾಡಿದ್ದಾರೆ. ಅವರಿಬ್ಬರ ನಡುವೆ ಪರ್ಸೆಂಟೇಜ್ ಜಗಳ ನಡೆಯುತ್ತಿದೆ’ ಎಂದು ದೂರಿದರು.</p>.<p>ಕಾಂಗ್ರೆಸ್ ಮುಖಂಡ ಬಿ.ಆರ್.ಪಾಟೀಲ ಮಾತನಾಡಿ,‘ಖರ್ಗೆ ಅವರ ಹೇಳಿಕೆಗೆ ನಾವು ಬದ್ಧರಾಗಿದ್ದೇವೆ. ವಿಷಜಂತುಗಳಿಂದ ತುಂಬಿಕೊಂಡಿರುವ ಆರ್ಎಸ್ಎಸ್ ದೇಶವನ್ನು ಹಾಳು ಮಾಡಿರುವುದನ್ನು ನೋಡಿ ಖರ್ಗೆ ಅವರು ನೋವಿನಿಂದ ಈ ಹೇಳಿಕೆ ನೀಡಿದ್ದಾರೆ. ಅವರು ವೈಯಕ್ತಿಕವಾಗಿ ಯಾರ ಬಗ್ಗೆಯೂ ದ್ವೇಷದಿಂದ ಹೇಳಿಕೆ ನೀಡಿಲ್ಲ’ ಎಂದರು.</p>.<p>‘ಒಂದು ಬಾರಿ ಸೋತಿದ್ದಕ್ಕೆ ಖರ್ಗೆ ಅವರು ವಿಷಕಾರಿ ವ್ಯಕ್ತಿತ್ವದವರು ಎಂದು ಹೇಳುವುದಾದರೆ ಸೋಲು ಕಂಡಿದ್ದ ವಾಜಪೇಯಿ, ಅಡ್ವಾಣಿ ಅವರೂ ವಿಷಕಾರಿಯೇ. ಈ ಬಗ್ಗೆ ಕಟೀಲ್ ಅವರು ಕಲಬುರ್ಗಿಗೆ ಬಂದು ಸ್ಪಷ್ಟೀಕರಣ ನೀಡಬೇಕು. ಅಲ್ಲಿಯವರೆಗೆ ನಮ್ಮ ವೈಚಾರಿಕ ಹೋರಾಟವನ್ನು ಮುಂದುವರಿಸುತ್ತೇವೆ’ ಎಂದು ಹೇಳಿದರು.</p>.<p>ರಾಜ್ಯಸಭೆ ಮಾಜಿ ಸದಸ್ಯ ಕೆ.ಬಿ.ಶಾಣಪ್ಪ ಮಾತನಾಡಿ,ದೊಡ್ಡ ನಾಯಕರ ಬಗ್ಗೆ ಮಾತನಾಡುವಾಗ ಎಚ್ಚರದಿಂದ ಇರಬೇಕು. ಖರ್ಗೆ ಸೋಲಿಗೆ ಮೋದಿಯೂ ಕಾರಣ. ಅಲ್ಲದೆ, ಸೋಲಿಗೆ ನಮ್ಮಲ್ಲಿಯೂ ಕಾರಣಗಳಿವೆ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.</p>.<p>ಶಾಸಕಿ ಖನೀಜ್ ಫಾತಿಮಾ, ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>