ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾರತದಲ್ಲಿ 15 ಕೋಟಿ ಅಲೆಮಾರಿಗಳು, 8 ಕೋಟಿ ಬುಡಕಟ್ಟು ಸಮುದಾಯದವರು ಇದ್ದಾರೆ. ಊರಿಂದೂರಿಗೆ ತಿರುಗಾಡುವ ಹಗಲು ವೇಷಗಾರರು, ದಾಸರು, ಗೊಂಬೆ ಆಡಿಸುವವರು ಮೊದಲಾದ ಅಲೆಮಾರಿಗಳು ಹಾಗೂ ಕಾಡಿನಲ್ಲೇ ಶತಮಾನಗಳಿಂದ ವಾಸವಾಗಿರುವ, ನಾಗರಿಕ ಸಮಾಜದಿಂದ ದೂರವೇ ಇರುವ ಬುಡಕಟ್ಟು ಸಮುದಾಯದವರು ಜನ್ಮಸ್ಥಳದ, ಜನನದ ದಾಖಲೆಗಳನ್ನು ಎಲ್ಲಿಂದ ತರಬೇಕು. ಇದೆಲ್ಲ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಗೊತ್ತಿಲ್ಲವೆಂದೇನಲ್ಲ. ಕಾಶ್ಮೀರಕ್ಕೆ ನೀಡಲಾಗಿದ್ದ 370 ವಿಶೇಷ ಸ್ಥಾನ ಮಾನ ರದ್ದು, ತ್ರಿವಳಿ ತಲಾಖ್ ತೀರ್ಪು, ರಾಮಮಂದಿರ ತೀರ್ಪುಗಳೆಲ್ಲ ತಮ್ಮ ಕಾರ್ಯಸೂಚಿಯ ಪರವಾಗಿಯೇ ಬಂದುದರಿಂದ ತಮ್ಮನ್ನು ತಡೆಯುವವರೇ ಇಲ್ಲ, ಏನು ಮಾಡಿದರೂ ನಡೆಯುತ್ತದೆ ಎಂಬ ಸರ್ವಾಧಿಕಾರಿ ಧೋರಣೆಯಿಂದ ಸಿಎಎ, ಎನ್ಆರ್ಸಿ, ಎನ್ಪಿಆರ್ ಜಾರಿಗೆ ತರಲು ಮುಂದಾಗಿದ್ದಾರೆ’ ಎಂದು ಟೀಕಿಸಿದರು.