<p><strong>ಕಾಳಗಿ</strong>: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ.</p>.<p>ಗುರುವಾರ ರಾತ್ರಿ 12.30ರಿಂದ 1 ಗಂಟೆಯ ಮಧ್ಯೆ ಅಲ್ಲಲ್ಲಿ ಭೂಮಿ ಕಂಪಿಸಿದಂತೆ ಕೇಳಿಬಂದಿದೆ. ಕಾಳಗಿ, ತೇಗಲತಿಪ್ಪಿ, ಹೊಸಳ್ಳಿ ಎಚ್., ರಾಜಾಪುರ, ಮಳಗಾ ಕೆ., ಕುಡ್ಡಳ್ಳಿ, ಕೊರವಿ, ನಾವದಗಿ ಮತ್ತು ವಜೀರ ಗಾಂವ ಗ್ರಾಮದಲ್ಲಿ ಭೂಮಿ ಕಂಪಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.</p>.<p>ಶಬ್ದ ಕೇಳಿಬರುತ್ತಿದ್ದಂತೆ ಜನರು ಹೆದರಿ ಮನೆಹೊರಗೆ ಓಡಿ ಬಂದಿದ್ದಾರೆ. ಕೆಲ ಗ್ರಾಮಗಳ ಜನರು ಮತ್ತೆ ಮನೆಯೊಳಗೆ ಹೋಗದೆ ಭಯಭೀ ತರಾಗಿ ಹೊರಗಡೆ ಮಲಗಿಕೊಂಡಿದ್ದಾರೆ.</p>.<p>ಯಾವುದೇ ರೀತಿಯ ಹಾನಿ ವರದಿಯಾಗಿಲ್ಲ. ಗುರುವಾರ ಮಧ್ಯರಾತ್ರಿ ಕೈಕೊಟ್ಟ ವಿದ್ಯುತ್ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಬಂದಿದೆ. ಈ ಮಧ್ಯೆ ಶುಕ್ರವಾರ ಮಧ್ಯಾಹ್ನ 12.35ರಿಂದ 12.40ರ ನಡುವೆ ಹಲಚೇರಾ ಗ್ರಾಮದಲ್ಲಿ ಮತ್ತೆ ಭೂಮಿ ಕಂಪಿಸಿದ ಶಬ್ದ ಕೇಳಿಬಂದಿದೆ.</p>.<p>ಕಾಳಗಿ ತಹಶೀಲ್ದಾರ್ ನಾಗನಾಥ ತರಗೆ ಅವರು ಹಲಚೇರಾ, ಹೊಸಳ್ಳಿ ಎಚ್., ತೇಗಲತಿಪ್ಪಿ ಮತ್ತು ರಾಜಾಪುರ ಗ್ರಾಮಕ್ಕೆ ಭೇಟಿ ನೀಡಿ ಜನರಿಂದ ಮಾಹಿತಿ ಪಡೆದರು. ಭೂವಿಜ್ಞಾನಿಗಳನ್ನು ಕರೆಸಿ ಸತ್ಯಾಸತ್ಯತೆ ಹೊರತರಲಾಗುವುದು. ಯಾವುದೇ ಕಾರಣಕ್ಕೂ ಜನರು ಭೀತಿ ಗೊಳಪಡಬಾರದು ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಳಗಿ</strong>: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ.</p>.<p>ಗುರುವಾರ ರಾತ್ರಿ 12.30ರಿಂದ 1 ಗಂಟೆಯ ಮಧ್ಯೆ ಅಲ್ಲಲ್ಲಿ ಭೂಮಿ ಕಂಪಿಸಿದಂತೆ ಕೇಳಿಬಂದಿದೆ. ಕಾಳಗಿ, ತೇಗಲತಿಪ್ಪಿ, ಹೊಸಳ್ಳಿ ಎಚ್., ರಾಜಾಪುರ, ಮಳಗಾ ಕೆ., ಕುಡ್ಡಳ್ಳಿ, ಕೊರವಿ, ನಾವದಗಿ ಮತ್ತು ವಜೀರ ಗಾಂವ ಗ್ರಾಮದಲ್ಲಿ ಭೂಮಿ ಕಂಪಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.</p>.<p>ಶಬ್ದ ಕೇಳಿಬರುತ್ತಿದ್ದಂತೆ ಜನರು ಹೆದರಿ ಮನೆಹೊರಗೆ ಓಡಿ ಬಂದಿದ್ದಾರೆ. ಕೆಲ ಗ್ರಾಮಗಳ ಜನರು ಮತ್ತೆ ಮನೆಯೊಳಗೆ ಹೋಗದೆ ಭಯಭೀ ತರಾಗಿ ಹೊರಗಡೆ ಮಲಗಿಕೊಂಡಿದ್ದಾರೆ.</p>.<p>ಯಾವುದೇ ರೀತಿಯ ಹಾನಿ ವರದಿಯಾಗಿಲ್ಲ. ಗುರುವಾರ ಮಧ್ಯರಾತ್ರಿ ಕೈಕೊಟ್ಟ ವಿದ್ಯುತ್ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಬಂದಿದೆ. ಈ ಮಧ್ಯೆ ಶುಕ್ರವಾರ ಮಧ್ಯಾಹ್ನ 12.35ರಿಂದ 12.40ರ ನಡುವೆ ಹಲಚೇರಾ ಗ್ರಾಮದಲ್ಲಿ ಮತ್ತೆ ಭೂಮಿ ಕಂಪಿಸಿದ ಶಬ್ದ ಕೇಳಿಬಂದಿದೆ.</p>.<p>ಕಾಳಗಿ ತಹಶೀಲ್ದಾರ್ ನಾಗನಾಥ ತರಗೆ ಅವರು ಹಲಚೇರಾ, ಹೊಸಳ್ಳಿ ಎಚ್., ತೇಗಲತಿಪ್ಪಿ ಮತ್ತು ರಾಜಾಪುರ ಗ್ರಾಮಕ್ಕೆ ಭೇಟಿ ನೀಡಿ ಜನರಿಂದ ಮಾಹಿತಿ ಪಡೆದರು. ಭೂವಿಜ್ಞಾನಿಗಳನ್ನು ಕರೆಸಿ ಸತ್ಯಾಸತ್ಯತೆ ಹೊರತರಲಾಗುವುದು. ಯಾವುದೇ ಕಾರಣಕ್ಕೂ ಜನರು ಭೀತಿ ಗೊಳಪಡಬಾರದು ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>