‘ಸೇಂದಿ ಇಳಿಸುವ ಕುಲಕಸುಬು ತೆಗೆದುಹಾಕಿದ ನಂತರ ಈಡಿಗ ಸಮುದಾಯ ತೀವ್ರ ತೊಂದರೆಗೆ ಒಳಗಾಗಿದೆ. ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಆಗುತ್ತಿಲ್ಲ.ಹೀಗಾಗಿ, ಟ್ರಸ್ಟ್ ವತಿಯಿಂದ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಶಾಲೆಗಳನ್ನು ತೆರೆಯುತ್ತೇವೆ. ಈಗಾಗಲೇ ಕಾರವಾರ, ಶಿವಮೊಗ್ಗ, ಕೊಡಗಿನಲ್ಲಿ ಜಾಗ ಇದೆ. ಶೀಘ್ರವೇ ಯಾದಗಿರಿಯಲ್ಲಿ ಶಾಲೆ ಸ್ಥಾಪಿಸುತ್ತೇವೆ’ ಎಂದು ಟ್ರಸ್ಟ್ನಿಂದ ಹಮ್ಮಿಕೊಂಡ ಚಟುವಟಿಕೆಗಳ ಮಾಹಿತಿ ನೀಡಿದರು.