‘ಕೊರೊನಾದ ಸಂಕಷ್ಟದ ಕಾಲದಲ್ಲಿಯೂ ಕಲಾವಿದರು ಕಲಾಪ್ರದರ್ಶನಗಳನ್ನು ಹಮ್ಮಿಕೊಳ್ಳುವ ಮೂಲಕ ಕಲೆಯ ಬಗ್ಗೆ ತಮಗಿರುವ ಒಲುವನ್ನು ಎತ್ತಿ ತೋರಿಸಿದ್ದಾರೆ. ಲಲಿಕಲಾ ಅಕಾಡೆಮಿಯು ಕರ್ನಾಟಕದ ಕಲಾಕ್ಷೇತ್ರದ ಬೆಳವಣಿಗೆಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅದರಲ್ಲಿ ಹಿರಿಯ ಕಲಾವಿದರ ಪ್ರಶಸ್ತಿ, ಸೀನಿಯರ್ ಫೆಲೋಶಿಪ್, ಕಲಾ ಶಿಬಿರ ಕಾರ್ಯಾಗಾರ, ವಾರ್ಷಿಕ ಪ್ರದರ್ಶನಗಳಂತಹ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಂಡಿದೆಲ್ಲದೆ, ಎಲೆ ಮರೆಯ ಕಾಯಿಯಂತೆ ಇದ್ದ ಕಲಾ ಕ್ಷೇತ್ರದಲ್ಲಿ ಇಂತಹ ಕಲಾವಿದರನ್ನು ಗುರುತಿಸಿ ಪ್ರದರ್ಶನಗಳನ್ನು ನೀಡುವ ನೂತನ ಕಾರ್ಯಕ್ರಮವನ್ನು ಮಾಡಲಾಗುವುದು’ ಎಂದು ಹೇಳಿದರು.