ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ತಂತಿ ಹರಿದುಬಿದ್ದು ರೈತ ಸಾವು

Last Updated 13 ಜೂನ್ 2020, 10:27 IST
ಅಕ್ಷರ ಗಾತ್ರ

ಕಲಬುರ್ಗಿ: ತಾಲ್ಲೂಕಿನ ಖಣದಾಳ ಗ್ರಾಮದ ಹೊಲದಲ್ಲಿ ಶುಕ್ರವಾರ ವಿದ್ಯುತ್ ತಂತಿ ಹರಿದುಬಿದ್ದು ರೈತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.‌

ದಗಡು ರೂಪ್ಲಾ ರಾಠೋಡ (59) ಮೃತಪಟ್ಟವರು. ತಾಂಡಾದ ಸಮೀಪದಲ್ಲಿರುವ ತಮ್ಮ ಹೊಲದಲ್ಲಿ ಭೂಮಿ ಹದಗೊಳಿಸಲು ಕುಂಟೆ ಹೊಡೆಯುವ ಕೆಲಸದಲ್ಲಿ ತೊಡಿಗಿಸಿಕೊಂಡಿದ್ದರು. ಮಧ್ಯಾಹ್ನ ಜೋರಾಗಿ ಗಾಳಿ ಬೀಸಿದ್ದರಿಂದ ವಿದ್ಯುತ್ ತಂತಿ ಕಡಿದುಕೊಂಡು ರೈತನ ಮೇಲೆಯೇ ಬಿದ್ದಿದೆ. ಇದನ್ನು ನೋಡಿ ಅಕ್ಕಪಕ್ಕದ ಹೊಲದವರು ದೌಡಾಯಿಸಿ ಎತ್ತುಗಳನ್ನು ಬಿಚ್ಚಿ ಓಡಿಸಿದರು. ಆದರೆ, ರೈತನನ್ನು ಪಾರು ಮಾಡಲು ಆಗಲಿಲ್ಲ.

ಫರಹತಾಬಾದ್‌ ಇನ್‍ಸ್ಪೆಕ್ಟರ್ ಎಂ.ಬಿ.ಚಿಕ್ಕಣ್ಣನವರ ಸ್ಥಳಕ್ಕೆ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT