ದಗಡು ರೂಪ್ಲಾ ರಾಠೋಡ (59) ಮೃತಪಟ್ಟವರು. ತಾಂಡಾದ ಸಮೀಪದಲ್ಲಿರುವ ತಮ್ಮ ಹೊಲದಲ್ಲಿ ಭೂಮಿ ಹದಗೊಳಿಸಲು ಕುಂಟೆ ಹೊಡೆಯುವ ಕೆಲಸದಲ್ಲಿ ತೊಡಿಗಿಸಿಕೊಂಡಿದ್ದರು. ಮಧ್ಯಾಹ್ನ ಜೋರಾಗಿ ಗಾಳಿ ಬೀಸಿದ್ದರಿಂದ ವಿದ್ಯುತ್ ತಂತಿ ಕಡಿದುಕೊಂಡು ರೈತನ ಮೇಲೆಯೇ ಬಿದ್ದಿದೆ. ಇದನ್ನು ನೋಡಿ ಅಕ್ಕಪಕ್ಕದ ಹೊಲದವರು ದೌಡಾಯಿಸಿ ಎತ್ತುಗಳನ್ನು ಬಿಚ್ಚಿ ಓಡಿಸಿದರು. ಆದರೆ, ರೈತನನ್ನು ಪಾರು ಮಾಡಲು ಆಗಲಿಲ್ಲ.