<p><strong>ಕಲಬುರಗಿ:</strong> ‘ಅರಣ್ಯ ಇಲಾಖೆಯ ವತಿಯಿಂದ ನೆಡಲಾಗುವ ಸಸಿಗಳ ಬೆಳವಣಿಗೆ ಮೇಲೆ ನಿಗಾವಹಿಸಲು ಪ್ರತಿ ಸಸಿಯನ್ನು ಜಿಯೊ ಟ್ಯಾಗ್ ಮೂಲಕ ದಾಖಲೀಕರಣ ಮಾಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದೇನೆ’ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದರು.</p>.<p>ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ಮಣ್ಣಿಗೆ ಹೊಂದಿಕೊಂಡು ಉತ್ತಮವಾಗಿ ಬೆಳೆಯುವ ಸಸಿಗಳನ್ನು ಸರ್ವೆ ನಂಬರ್ ಸಹಿತ ಜಿಯೊ ಟ್ಯಾಗ್ ಮಾಡಲಾಗುವುದು. ಸಸಿ ಯಾವ ವರ್ಷ ಎಷ್ಟು ಬೆಳೆಯಿತು? ಸ್ಥಿತಿಗತಿ ಏನಿದೆ ಎಂಬ ಮಾಹಿತಿ ಇಲಾಖೆ ವೆಬ್ಸೈಟ್ನಲ್ಲಿ ಸಿಗಲಿದೆ’ ಎಂದರು.</p>.<p>‘ನಮ್ಮ ಸರ್ಕಾರ ಬಂದ ಮೇಲೆ 8.50 ಕೋಟಿ ಸಸಿ ನೆಡಲಾಗಿದೆ. ಇವುಗಳಲ್ಲಿ ಶೇ 70ರಷ್ಟು ಉಳಿದಿವೆ. ಈ ವರ್ಷ ಪ್ರತಿ ನಗರದಲ್ಲಿ ತಲಾ ಒಂದು ಲಕ್ಷ ಸಸಿ ನೆಡಲಾಗುವುದು. ಅವುಗಳನ್ನು ಥರ್ಡ್ ಪಾರ್ಟಿ ಏಜೆನ್ಸಿಯಿಂದ ಪರಿಶೀಲನೆ ಸಹ ನಡೆಸಲಾಗುವುದು’ ಎಂದು ಹೇಳಿದರು.</p>.<p>‘ಮಾಲಿನ್ಯಕ್ಕೆ ಕಾರಣವಾಗುವ ಕಾರ್ಖಾನೆಗಳ ಬಗ್ಗೆ ವರದಿ ತರಿಸಿಕೊಂಡು, ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ದಂಡವನ್ನು ವಿಧಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ‘ಅರಣ್ಯ ಇಲಾಖೆಯ ವತಿಯಿಂದ ನೆಡಲಾಗುವ ಸಸಿಗಳ ಬೆಳವಣಿಗೆ ಮೇಲೆ ನಿಗಾವಹಿಸಲು ಪ್ರತಿ ಸಸಿಯನ್ನು ಜಿಯೊ ಟ್ಯಾಗ್ ಮೂಲಕ ದಾಖಲೀಕರಣ ಮಾಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದೇನೆ’ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದರು.</p>.<p>ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ಮಣ್ಣಿಗೆ ಹೊಂದಿಕೊಂಡು ಉತ್ತಮವಾಗಿ ಬೆಳೆಯುವ ಸಸಿಗಳನ್ನು ಸರ್ವೆ ನಂಬರ್ ಸಹಿತ ಜಿಯೊ ಟ್ಯಾಗ್ ಮಾಡಲಾಗುವುದು. ಸಸಿ ಯಾವ ವರ್ಷ ಎಷ್ಟು ಬೆಳೆಯಿತು? ಸ್ಥಿತಿಗತಿ ಏನಿದೆ ಎಂಬ ಮಾಹಿತಿ ಇಲಾಖೆ ವೆಬ್ಸೈಟ್ನಲ್ಲಿ ಸಿಗಲಿದೆ’ ಎಂದರು.</p>.<p>‘ನಮ್ಮ ಸರ್ಕಾರ ಬಂದ ಮೇಲೆ 8.50 ಕೋಟಿ ಸಸಿ ನೆಡಲಾಗಿದೆ. ಇವುಗಳಲ್ಲಿ ಶೇ 70ರಷ್ಟು ಉಳಿದಿವೆ. ಈ ವರ್ಷ ಪ್ರತಿ ನಗರದಲ್ಲಿ ತಲಾ ಒಂದು ಲಕ್ಷ ಸಸಿ ನೆಡಲಾಗುವುದು. ಅವುಗಳನ್ನು ಥರ್ಡ್ ಪಾರ್ಟಿ ಏಜೆನ್ಸಿಯಿಂದ ಪರಿಶೀಲನೆ ಸಹ ನಡೆಸಲಾಗುವುದು’ ಎಂದು ಹೇಳಿದರು.</p>.<p>‘ಮಾಲಿನ್ಯಕ್ಕೆ ಕಾರಣವಾಗುವ ಕಾರ್ಖಾನೆಗಳ ಬಗ್ಗೆ ವರದಿ ತರಿಸಿಕೊಂಡು, ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ದಂಡವನ್ನು ವಿಧಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>