ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಯುವ ಮುಖಂಡ ಭೀಮಾಶಂಕರ ಪಾಟೀಲ, ‘ಕಲಿಯುಗದ ಭೂ ಕೈಲಾಸವಾಗಿ, ಬೇಡಿ ಬಂದ ಭಕ್ತರ ಭಾಗ್ಯದ ನಿಧಿಯಾಗಿ, ಕತ್ತಲುಂಡ ಸಮಾಜದ ಬೆಳಕಾಗಿ ಶ್ರೀಮಠ ಕೆಲಸ ಮಾಡುತ್ತಿರುವುದ ಹೆಮ್ಮೆಯ ವಿಚಾರ. ಕಲ್ಯಾಣ ಕರ್ನಾಟಕದಲ್ಲಿ ಶಿವಯೋಗದ ಮೂಲಕ ಭಕ್ತರ ಸಂಕಷ್ಟ ಪರಿಹರಿಸುತ್ತಿರುವ ಏಕೈಕ ಮಠ ಜಿಡಗಾ. ನಿರಂತರ ಅನ್ನ,ಜ್ಞಾನ ದಾಸೋಹದಂಥಹ ಮಹತ್ಕಾರ್ಯಗಳನ್ನು ಶ್ರೀಮಠ ಮಾಡುತ್ತ ಬರುತ್ತಿದೆ’ ಎಂದರು.