‘ಉತ್ತಮ ಆಹಾರ, ವಿಹಾರ, ಚಿಂತನೆ, ಯೋಗ, ಪ್ರಾಣಾಯಾಮ, ಧ್ಯಾನಗಳನ್ನು ಮಾಡುವ ಬಗೆಯ ಬಗ್ಗೆ ಮಾಹಿತಿ ಪಡೆಯಬಹುದು. ಮನೆಯಲ್ಲಿಯೇ ಲಭ್ಯವಿರುವ ಅಡುಗೆ ಮನೆ ಸಾಮಾನು ಬಳಸುವುದು, ಅವಶ್ಯವಿದ್ದಲ್ಲಿ ರೋಗ ಲಕ್ಷಣ ತಿಳಿದುಕೊಂಡು ಆಯುರ್ವೇದ ಔಷಧಿಗಳಿಂದ ಚಿಕಿತ್ಸೆ, ಮುಂತಾದ ಬಹು ಆಯಾಮ ಚಿಕಿತ್ಸೆ ನೀಡಿ ರೋಗ ನಿವಾರಣೆ ಮಾಡುವುದು. ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ವರ್ಧನೆ, ಮಾನಸಿಕ ಸಂಕಲ್ಪ, ಶಕ್ತಿ ವೃದ್ಧಿಸುವುದು ಈ ಚಿಕಿತ್ಸೆಯ ಭಾಗವಾಗಿವೆ’ ಎಂದು ಡಾ.ನಿರ್ಮಲಾ ಕೆಳಮನಿ ತಿಳಿಸಿದ್ದಾರೆ.