<p><strong>ಕಲಬುರಗಿ</strong>: ‘ಗುಲಬರ್ಗಾ ದೂರದರ್ಶನ ಕೇಂದ್ರ ಮುಚ್ಚುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಬಿಡಬೇಕು. ಇಲ್ಲದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು’ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್.ಮಾಲಿಪಾಟೀಲ ಎಚ್ಚರಿಕೆ ನೀಡಿದರು.</p>.<p>ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ 1977ರ ಸೆ.3ರಂದು ಗುಲಬರ್ಗಾದಲ್ಲಿ ದೂರದರ್ಶನ ಕೇಂದ್ರ ಆರಂಭವಾಯಿತು. ಇದು ಈ ಭಾಗದ ಜನರಿಗೆ ಅಸ್ಮಿತೆಯ ವಿಷಯವಾಗಿದೆ. ಈ ಕೇಂದ್ರದಿಂದ ಕಲಾವಿದರು, ಸಾಹಿತಿಗಳು, ಸಂಪನ್ಮೂಲ ವ್ಯಕ್ತಿಗಳು ಹಾಗೂ ವಿಜ್ಞಾನಿಗಳಿಗೆ ಅನುಕೂಲವಾಗಿತ್ತು’ ಎಂದರು.</p>.<p>‘2022ರಲ್ಲಿ ದೇಶದಲ್ಲಿ ಹಳೆ ದೂರದರ್ಶನ ಕೇಂದ್ರಗಳನ್ನು ಮುಚ್ಚುವ ಪ್ರಯತ್ನ ಆರಂಭವಾಯಿತು. ಈ ಪ್ರಯತ್ನದ ಭಾಗವಾಗಿ ಈ ಕೇಂದ್ರದ ಅಗತ್ಯತೆ ಕುರಿತು ತಿಳಿದುಕೊಳ್ಳಲು ಪ್ರಸಾರ ಭಾರತಿಯ ನಿರ್ದೇಶಕರು ಗುಲಬರ್ಗಾಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕೇಂದ್ರವನ್ನು ಮುಚ್ಚದಂತೆ ಮನವಿ ಸಲ್ಲಿಸಲಾಗಿತ್ತು. ಕೇಂದ್ರವನ್ನು ಮುಚ್ಚುವುದಿಲ್ಲ. ಡಿಜಿಟಲೀಕರಣಕ್ಕೆ ಸಮಯ ಬೇಕಾಗುತ್ತದೆ ಎಂದು ಹೇಳಿದ್ದರು’ ಎಂದು ತಿಳಿಸಿದರು.</p>.<p>‘ಪ್ರಾರಂಭದಲ್ಲಿ ಗುಲಬರ್ಗಾ ದೂರದರ್ಶನ ಕೇಂದ್ರದಲ್ಲಿ 91 ಸಿಬ್ಬಂದಿ ಮತ್ತು ಅಧಿಕಾರಿಗಳು ಕೆಲಸ ಮಾಡುತ್ತಿದ್ದರು. ಬಳಿಕ 2021ರಲ್ಲಿ ಇಲ್ಲಿನ ಖಾಲಿ ಹುದ್ದೆಗಳನ್ನು ತುಂಬಲಿಲ್ಲ. ಇದ್ದ ಸಿಬ್ಬಂದಿಯನ್ನೂ ಬೇರೆಡೆ ವರ್ಗಾವಣೆ ಮಾಡಲಾಯಿತು. ಯಂತ್ರೋಪಕರಣಗಳನ್ನೂ ಸಾಗಿಸಲಾಯಿತು. ಈ ಮೂಲಕ ಕೇಂದ್ರ ಸರ್ಕಾರ ಈ ಭಾಗದ ದಾಖಲೆ ಅಳಿಸುವ ಕೆಲಸಕ್ಕೆ ಕೈಹಾಕಿತು. ಇದನ್ನು ಕೈಬಿಡಬೇಕು. ಅನ್ಯಾಯವಾಗದಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.</p>.<p>ಗಿರೀಶ ಕಡ್ಲೆವಾಡ, ಲಿಂಗರಾಜ ಶಿರಗಾಪುರ, ಭಾನುಕುಮಾರ, ಶಿವಾನಂದ ಅಣಜಗಿ ಸೇರಿ ಹಲವರು ಇದ್ದರು.</p>.<p><strong>‘ದೂರದರ್ಶನ ಕೇಂದ್ರ ಅಭಿಮಾನದ ಸಂಗತಿ’ </strong></p><p>‘ಕವಿರಾಜಮಾರ್ಗ ಹಾಗೂ ದೂರದರ್ಶನ ಈ ಭಾಗದ ಅಭಿಮಾನದ ಸಂಗತಿಗಳಾಗಿವೆ’ ಎಂದು ಸಾಹಿತಿ ಸ್ವಾಮಿರಾವ ಕುಲಕರ್ಣಿ ಅಭಿಪ್ರಾಯಪಟ್ಟರು.</p><p> ‘1977ರಲ್ಲಿ ದೂರದರ್ಶನ ಕೇಂದ್ರ ಆರಂಭವಾದಾಗ ಹೈದರಾಬಾದ್ನಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು. ಇಲ್ಲಿಯೇ ಚಿತ್ರೀಕರಣ ಮಾಡುವಂತೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು. ಬಳಿಕ ಇಲ್ಲಿಯೇ ಚಿತ್ರೀಕರಣ ಮಾಡಲು ಆರಂಭಿಸಿದರು. ಬಳಿಕ ಈ ಭಾಗದ ಅನೇಕ ಸಂಗತಿಗಳಿಗೂ ಮಹತ್ವ ಬಂದಿತು’ ಎಂದರು. </p><p>‘ದೂರದರ್ಶನ ಕೇಂದ್ರ ಈ ಭಾಗದ ಪ್ರಮುಖ ಸರ್ಕಾರಿ ಆಸ್ತಿಯಾಗಿದೆ. 2027ಕ್ಕೆ ಇದಕ್ಕೆ 50 ವರ್ಷ ತುಂಬಲಿದೆ. ಇಂಥ ಸಂದರ್ಭದಲ್ಲಿ ಕೇಂದ್ರ ಮುಚ್ಚುವ ಕಾರ್ಯ ಒಳ್ಳೆಯದಲ್ಲ. ಸಚಿವರು ಸೇರಿದಂತೆ ಜನಪ್ರತಿನಿಧಿಗಳು ಇದರ ವಿರುದ್ಧ ಧ್ವನಿ ಎತ್ತಬೇಕು. ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಬೇಕು’ ಎಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ‘ಗುಲಬರ್ಗಾ ದೂರದರ್ಶನ ಕೇಂದ್ರ ಮುಚ್ಚುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಬಿಡಬೇಕು. ಇಲ್ಲದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು’ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್.ಮಾಲಿಪಾಟೀಲ ಎಚ್ಚರಿಕೆ ನೀಡಿದರು.</p>.<p>ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ 1977ರ ಸೆ.3ರಂದು ಗುಲಬರ್ಗಾದಲ್ಲಿ ದೂರದರ್ಶನ ಕೇಂದ್ರ ಆರಂಭವಾಯಿತು. ಇದು ಈ ಭಾಗದ ಜನರಿಗೆ ಅಸ್ಮಿತೆಯ ವಿಷಯವಾಗಿದೆ. ಈ ಕೇಂದ್ರದಿಂದ ಕಲಾವಿದರು, ಸಾಹಿತಿಗಳು, ಸಂಪನ್ಮೂಲ ವ್ಯಕ್ತಿಗಳು ಹಾಗೂ ವಿಜ್ಞಾನಿಗಳಿಗೆ ಅನುಕೂಲವಾಗಿತ್ತು’ ಎಂದರು.</p>.<p>‘2022ರಲ್ಲಿ ದೇಶದಲ್ಲಿ ಹಳೆ ದೂರದರ್ಶನ ಕೇಂದ್ರಗಳನ್ನು ಮುಚ್ಚುವ ಪ್ರಯತ್ನ ಆರಂಭವಾಯಿತು. ಈ ಪ್ರಯತ್ನದ ಭಾಗವಾಗಿ ಈ ಕೇಂದ್ರದ ಅಗತ್ಯತೆ ಕುರಿತು ತಿಳಿದುಕೊಳ್ಳಲು ಪ್ರಸಾರ ಭಾರತಿಯ ನಿರ್ದೇಶಕರು ಗುಲಬರ್ಗಾಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕೇಂದ್ರವನ್ನು ಮುಚ್ಚದಂತೆ ಮನವಿ ಸಲ್ಲಿಸಲಾಗಿತ್ತು. ಕೇಂದ್ರವನ್ನು ಮುಚ್ಚುವುದಿಲ್ಲ. ಡಿಜಿಟಲೀಕರಣಕ್ಕೆ ಸಮಯ ಬೇಕಾಗುತ್ತದೆ ಎಂದು ಹೇಳಿದ್ದರು’ ಎಂದು ತಿಳಿಸಿದರು.</p>.<p>‘ಪ್ರಾರಂಭದಲ್ಲಿ ಗುಲಬರ್ಗಾ ದೂರದರ್ಶನ ಕೇಂದ್ರದಲ್ಲಿ 91 ಸಿಬ್ಬಂದಿ ಮತ್ತು ಅಧಿಕಾರಿಗಳು ಕೆಲಸ ಮಾಡುತ್ತಿದ್ದರು. ಬಳಿಕ 2021ರಲ್ಲಿ ಇಲ್ಲಿನ ಖಾಲಿ ಹುದ್ದೆಗಳನ್ನು ತುಂಬಲಿಲ್ಲ. ಇದ್ದ ಸಿಬ್ಬಂದಿಯನ್ನೂ ಬೇರೆಡೆ ವರ್ಗಾವಣೆ ಮಾಡಲಾಯಿತು. ಯಂತ್ರೋಪಕರಣಗಳನ್ನೂ ಸಾಗಿಸಲಾಯಿತು. ಈ ಮೂಲಕ ಕೇಂದ್ರ ಸರ್ಕಾರ ಈ ಭಾಗದ ದಾಖಲೆ ಅಳಿಸುವ ಕೆಲಸಕ್ಕೆ ಕೈಹಾಕಿತು. ಇದನ್ನು ಕೈಬಿಡಬೇಕು. ಅನ್ಯಾಯವಾಗದಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.</p>.<p>ಗಿರೀಶ ಕಡ್ಲೆವಾಡ, ಲಿಂಗರಾಜ ಶಿರಗಾಪುರ, ಭಾನುಕುಮಾರ, ಶಿವಾನಂದ ಅಣಜಗಿ ಸೇರಿ ಹಲವರು ಇದ್ದರು.</p>.<p><strong>‘ದೂರದರ್ಶನ ಕೇಂದ್ರ ಅಭಿಮಾನದ ಸಂಗತಿ’ </strong></p><p>‘ಕವಿರಾಜಮಾರ್ಗ ಹಾಗೂ ದೂರದರ್ಶನ ಈ ಭಾಗದ ಅಭಿಮಾನದ ಸಂಗತಿಗಳಾಗಿವೆ’ ಎಂದು ಸಾಹಿತಿ ಸ್ವಾಮಿರಾವ ಕುಲಕರ್ಣಿ ಅಭಿಪ್ರಾಯಪಟ್ಟರು.</p><p> ‘1977ರಲ್ಲಿ ದೂರದರ್ಶನ ಕೇಂದ್ರ ಆರಂಭವಾದಾಗ ಹೈದರಾಬಾದ್ನಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು. ಇಲ್ಲಿಯೇ ಚಿತ್ರೀಕರಣ ಮಾಡುವಂತೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು. ಬಳಿಕ ಇಲ್ಲಿಯೇ ಚಿತ್ರೀಕರಣ ಮಾಡಲು ಆರಂಭಿಸಿದರು. ಬಳಿಕ ಈ ಭಾಗದ ಅನೇಕ ಸಂಗತಿಗಳಿಗೂ ಮಹತ್ವ ಬಂದಿತು’ ಎಂದರು. </p><p>‘ದೂರದರ್ಶನ ಕೇಂದ್ರ ಈ ಭಾಗದ ಪ್ರಮುಖ ಸರ್ಕಾರಿ ಆಸ್ತಿಯಾಗಿದೆ. 2027ಕ್ಕೆ ಇದಕ್ಕೆ 50 ವರ್ಷ ತುಂಬಲಿದೆ. ಇಂಥ ಸಂದರ್ಭದಲ್ಲಿ ಕೇಂದ್ರ ಮುಚ್ಚುವ ಕಾರ್ಯ ಒಳ್ಳೆಯದಲ್ಲ. ಸಚಿವರು ಸೇರಿದಂತೆ ಜನಪ್ರತಿನಿಧಿಗಳು ಇದರ ವಿರುದ್ಧ ಧ್ವನಿ ಎತ್ತಬೇಕು. ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಬೇಕು’ ಎಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>