<p><strong>ಕಲಬುರಗಿ:</strong> ಕೃಷಿ ಹಾಗೂ ಕೃಷಿ ಸಂಬಂಧಿತ ಮಧ್ಯಮಾವಧಿ ಸುಸ್ತಿ ಸಾಲಗಳ ಅಸಲು ಪಾವತಿಗೂ ಕಲಬುರಗಿ–ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್(ಕೆವೈಡಿಸಿಸಿ ಬ್ಯಾಂಕ್) ವ್ಯಾಪ್ತಿಯ ರೈತರು ಉತ್ಸಾಹ ತೋರುತ್ತಿಲ್ಲ.</p>.<p>ಕೃಷಿ ಹಾಗೂ ಕೃಷಿ ಸಂಬಂಧಿತ ಮಧ್ಯಮಾವಧಿ ಸುಸ್ತಿ ಸಾಲಗಳ ಅಸಲು ಪಾವತಿಸಿದರೆ, ಆ ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡುವುದಾಗಿ ರಾಜ್ಯ ಸರ್ಕಾರ 2024ರ ಜ.20ರಂದು ಆದೇಶ ಹೊರಡಿಸಿತ್ತು. ಈ ಯೋಜನೆಯಡಿ ಕೆವೈಡಿಸಿಸಿ ಬ್ಯಾಂಕ್ನ 10 ಶಾಖೆಗಳ 767 ರೈತರು ಫಲಾನುಭವಿಗಳಾಗಿದ್ದು, ಒಟ್ಟು ₹ 38.29 ಕೋಟಿಯಷ್ಟು ಸುಸ್ತಿ ಸಾಲ ಮರು ಪಾವತಿಸುವ ಗುರಿ ಹೊಂದಲಾಗಿತ್ತು.</p>.<p>ಆದರೆ, ಫೆ.26ರ ಅಂತ್ಯದ ತನಕ ಕೇವಲ 206 ರೈತರು ಮಾತ್ರ ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಬ್ಯಾಂಕ್ಗೆ ಅಸಲಿನ ರೂಪದಲ್ಲಿ ಒಟ್ಟು ₹ 7.86 ಕೋಟಿ ಪಾವತಿಸಿದ್ದಾರೆ. ಇನ್ನುಳಿದ 561 ರೈತರು ಈ ಯೋಜನೆಯ ಲಾಭ ಪಡೆಯಲು ಉತ್ಸಾಹವೇ ತೋರಿಲ್ಲ.</p>.<p>ಈ ಯೋಜನೆಯ ಲಾಭ ಪಡೆಯಲು ಫೆ.29ರ ಒಳಗೆ ಸಾಲದ ಅಸಲು ಮೊತ್ತವನ್ನು ರೈತರು ಪಾವತಿಸಬೇಕಿದ್ದು, ಅದಕ್ಕೆ ಮಂಗಳವಾರ ಹೊರತು ಪಡಿಸಿ ಕೇವಲ ಎರಡು ದಿನಗಳಷ್ಟೇ ಉಳಿದಿವೆ.</p>.<h2><strong>ಜೇವರ್ಗಿ, ನೆಹರೂ ಗಂಜ್ ಶಾಖೆ ಮುಂದೆ:</strong></h2>.<p>ಈ ಯೋಜನೆಯಡಿ ಈ ತನಕ ಒಟ್ಟು ಫಲಾನುಭವಿ ರೈತರ ಪೈಕಿ ಶೇ 20.92ರಷ್ಟು ಮಂದಿ ಬ್ಯಾಂಕ್ಗೆ ಅಸಲು ಪಾವತಿಸಿದ್ದಾರೆ. ಇನ್ನುಳಿದ, ಶೇ 79.08ರಷ್ಟು ಫಲಾನುಭವಿ ರೈತರು ಯೋಜನೆ ಸದ್ಬಳಕೆಗೆ ಆಸಕ್ತಿ ತೋರಿಲ್ಲ.</p>.<p>ಈ ಯೋಜನೆಯಡಿ ಸಾಲಪಾವತಿಸಲು ಕೆವೈಡಿಸಿಸಿ ಬ್ಯಾಂಕ್ನ ಜೇವರ್ಗಿ ಶಾಖೆ ವ್ಯಾಪ್ತಿಯ ರೈತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಒಟ್ಟು 170 ಸಾಲಗಾರ ರೈತರ ಪೈಕಿ, 46 ರೈತರು ಅಸಲು ಪಾವತಿಸಿದ್ದಾರೆ.</p>.<p>ಇನ್ನು, ಮೊತ್ತದ ಲೆಕ್ಕಾಚಾರದಲ್ಲಿ ಬ್ಯಾಂಕ್ ನೆಹರೂ ಗಂಜ್ ಶಾಖೆಯಲ್ಲಿ ಅತಿ ಹೆಚ್ಚು ಅಂದರೆ ₹ 1.22 ಕೋಟಿ ಈ ಯೋಜನೆಯಡಿ ಜಮೆಯಾಗಿದೆ.</p>.<p>‘ಈ ಯೋಜನೆಯ ಕುರಿತು ಬ್ಯಾಂಕ್ನ ಹತ್ತೂ ಶಾಖೆಗಳಲ್ಲಿ ಶಾಖಾ ವ್ಯವಸ್ಥಾಪಕರ ನೇತೃತ್ವದಲ್ಲಿ ತಂಡಗಳನ್ನು ರಚಿಸಿ, ಜ.24ರಿಂದ ಸುಸ್ತಿ ಸಾಲಗಾರರಿಗೆ ಅಸಲು ಪಾವತಿಸಲು ಮನವೊಲಿಸುವ ಕಾರ್ಯವನ್ನೂ ಮಾಡಲಾಗಿದೆ’ ಎಂದು ಕೆ–ವೈಡಿಸಿಸಿ ಬ್ಯಾಂಕ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<div><blockquote>ಸಾಲ ಪಾವತಿ ಗಡುವು ವಿಸ್ತರಣೆಯ ಪ್ರಸ್ತಾಪವಿಲ್ಲ. ಹೀಗಾಗಿ ರೈತರು ಕಷ್ಟವಾದರೂ ಸರಿ ಸಾಲ ತುಂಬಬೇಕು. ಇದರಿಂದ ಬ್ಯಾಂಕ್ಗಿಂತ ರೈತರಿಗೆ ಹೆಚ್ಚಿನ ಲಾಭವಿದೆ ಎಂಬುದನ್ನು ಅರಿಯಬೇಕು</blockquote><span class="attribution">ಸೋಮಶೇಖರ ಗೋನಾಯಕ ಅಧ್ಯಕ್ಷ ಕೆವೈಡಿಸಿಸಿ ಬ್ಯಾಂಕ್</span></div>.<div><blockquote>ಸದ್ಯ ರೈತರ ಬಳಿ ದುಡ್ಡಿಲ್ಲ. ಹೀಗಾಗಿ ಬಡ್ಡಿ ಮನ್ನಾಯೋಜನೆಯಡಿ ಅಸಲು ಪಾವತಿಗೆ ಸರ್ಕಾರ ಕನಿಷ್ಠ ಮೂರು ತಿಂಗಳು ಕಾಲಾವಕಾಶ ವಿಸ್ತರಿಸಬೇಕು</blockquote><span class="attribution">ಬಸವರಾಜ ಬೂದಿಹಾಳ ಅಧ್ಯಕ್ಷ ಕಲಬುರಗಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ಕೃಷಿ ಹಾಗೂ ಕೃಷಿ ಸಂಬಂಧಿತ ಮಧ್ಯಮಾವಧಿ ಸುಸ್ತಿ ಸಾಲಗಳ ಅಸಲು ಪಾವತಿಗೂ ಕಲಬುರಗಿ–ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್(ಕೆವೈಡಿಸಿಸಿ ಬ್ಯಾಂಕ್) ವ್ಯಾಪ್ತಿಯ ರೈತರು ಉತ್ಸಾಹ ತೋರುತ್ತಿಲ್ಲ.</p>.<p>ಕೃಷಿ ಹಾಗೂ ಕೃಷಿ ಸಂಬಂಧಿತ ಮಧ್ಯಮಾವಧಿ ಸುಸ್ತಿ ಸಾಲಗಳ ಅಸಲು ಪಾವತಿಸಿದರೆ, ಆ ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡುವುದಾಗಿ ರಾಜ್ಯ ಸರ್ಕಾರ 2024ರ ಜ.20ರಂದು ಆದೇಶ ಹೊರಡಿಸಿತ್ತು. ಈ ಯೋಜನೆಯಡಿ ಕೆವೈಡಿಸಿಸಿ ಬ್ಯಾಂಕ್ನ 10 ಶಾಖೆಗಳ 767 ರೈತರು ಫಲಾನುಭವಿಗಳಾಗಿದ್ದು, ಒಟ್ಟು ₹ 38.29 ಕೋಟಿಯಷ್ಟು ಸುಸ್ತಿ ಸಾಲ ಮರು ಪಾವತಿಸುವ ಗುರಿ ಹೊಂದಲಾಗಿತ್ತು.</p>.<p>ಆದರೆ, ಫೆ.26ರ ಅಂತ್ಯದ ತನಕ ಕೇವಲ 206 ರೈತರು ಮಾತ್ರ ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಬ್ಯಾಂಕ್ಗೆ ಅಸಲಿನ ರೂಪದಲ್ಲಿ ಒಟ್ಟು ₹ 7.86 ಕೋಟಿ ಪಾವತಿಸಿದ್ದಾರೆ. ಇನ್ನುಳಿದ 561 ರೈತರು ಈ ಯೋಜನೆಯ ಲಾಭ ಪಡೆಯಲು ಉತ್ಸಾಹವೇ ತೋರಿಲ್ಲ.</p>.<p>ಈ ಯೋಜನೆಯ ಲಾಭ ಪಡೆಯಲು ಫೆ.29ರ ಒಳಗೆ ಸಾಲದ ಅಸಲು ಮೊತ್ತವನ್ನು ರೈತರು ಪಾವತಿಸಬೇಕಿದ್ದು, ಅದಕ್ಕೆ ಮಂಗಳವಾರ ಹೊರತು ಪಡಿಸಿ ಕೇವಲ ಎರಡು ದಿನಗಳಷ್ಟೇ ಉಳಿದಿವೆ.</p>.<h2><strong>ಜೇವರ್ಗಿ, ನೆಹರೂ ಗಂಜ್ ಶಾಖೆ ಮುಂದೆ:</strong></h2>.<p>ಈ ಯೋಜನೆಯಡಿ ಈ ತನಕ ಒಟ್ಟು ಫಲಾನುಭವಿ ರೈತರ ಪೈಕಿ ಶೇ 20.92ರಷ್ಟು ಮಂದಿ ಬ್ಯಾಂಕ್ಗೆ ಅಸಲು ಪಾವತಿಸಿದ್ದಾರೆ. ಇನ್ನುಳಿದ, ಶೇ 79.08ರಷ್ಟು ಫಲಾನುಭವಿ ರೈತರು ಯೋಜನೆ ಸದ್ಬಳಕೆಗೆ ಆಸಕ್ತಿ ತೋರಿಲ್ಲ.</p>.<p>ಈ ಯೋಜನೆಯಡಿ ಸಾಲಪಾವತಿಸಲು ಕೆವೈಡಿಸಿಸಿ ಬ್ಯಾಂಕ್ನ ಜೇವರ್ಗಿ ಶಾಖೆ ವ್ಯಾಪ್ತಿಯ ರೈತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಒಟ್ಟು 170 ಸಾಲಗಾರ ರೈತರ ಪೈಕಿ, 46 ರೈತರು ಅಸಲು ಪಾವತಿಸಿದ್ದಾರೆ.</p>.<p>ಇನ್ನು, ಮೊತ್ತದ ಲೆಕ್ಕಾಚಾರದಲ್ಲಿ ಬ್ಯಾಂಕ್ ನೆಹರೂ ಗಂಜ್ ಶಾಖೆಯಲ್ಲಿ ಅತಿ ಹೆಚ್ಚು ಅಂದರೆ ₹ 1.22 ಕೋಟಿ ಈ ಯೋಜನೆಯಡಿ ಜಮೆಯಾಗಿದೆ.</p>.<p>‘ಈ ಯೋಜನೆಯ ಕುರಿತು ಬ್ಯಾಂಕ್ನ ಹತ್ತೂ ಶಾಖೆಗಳಲ್ಲಿ ಶಾಖಾ ವ್ಯವಸ್ಥಾಪಕರ ನೇತೃತ್ವದಲ್ಲಿ ತಂಡಗಳನ್ನು ರಚಿಸಿ, ಜ.24ರಿಂದ ಸುಸ್ತಿ ಸಾಲಗಾರರಿಗೆ ಅಸಲು ಪಾವತಿಸಲು ಮನವೊಲಿಸುವ ಕಾರ್ಯವನ್ನೂ ಮಾಡಲಾಗಿದೆ’ ಎಂದು ಕೆ–ವೈಡಿಸಿಸಿ ಬ್ಯಾಂಕ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<div><blockquote>ಸಾಲ ಪಾವತಿ ಗಡುವು ವಿಸ್ತರಣೆಯ ಪ್ರಸ್ತಾಪವಿಲ್ಲ. ಹೀಗಾಗಿ ರೈತರು ಕಷ್ಟವಾದರೂ ಸರಿ ಸಾಲ ತುಂಬಬೇಕು. ಇದರಿಂದ ಬ್ಯಾಂಕ್ಗಿಂತ ರೈತರಿಗೆ ಹೆಚ್ಚಿನ ಲಾಭವಿದೆ ಎಂಬುದನ್ನು ಅರಿಯಬೇಕು</blockquote><span class="attribution">ಸೋಮಶೇಖರ ಗೋನಾಯಕ ಅಧ್ಯಕ್ಷ ಕೆವೈಡಿಸಿಸಿ ಬ್ಯಾಂಕ್</span></div>.<div><blockquote>ಸದ್ಯ ರೈತರ ಬಳಿ ದುಡ್ಡಿಲ್ಲ. ಹೀಗಾಗಿ ಬಡ್ಡಿ ಮನ್ನಾಯೋಜನೆಯಡಿ ಅಸಲು ಪಾವತಿಗೆ ಸರ್ಕಾರ ಕನಿಷ್ಠ ಮೂರು ತಿಂಗಳು ಕಾಲಾವಕಾಶ ವಿಸ್ತರಿಸಬೇಕು</blockquote><span class="attribution">ಬಸವರಾಜ ಬೂದಿಹಾಳ ಅಧ್ಯಕ್ಷ ಕಲಬುರಗಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>