ಪ್ರಸ್ತುತ ಆಳಂದ ತಾಲ್ಲೂಕಿನ ಸುಂಟನೂರು ಗ್ರಾ.ಪಂ ಪಿಡಿಒ ಆಗಿರುವ ಪಾರ್ವತಿ ಪೂಜಾರಿ ಅವರು, ಯಾಗಾಪೂರ ಗ್ರಾ.ಪಂ. ಪಿಡಿಒ ಆಗಿದ್ದಾಗ ₹ 53 ಲಕ್ಷ ಅನುದಾನ ದುರ್ಬಳಕೆ ಮಾಡಿಕೊಂಡಿದ್ದರು ಎಂಬ ಆರೋಪವಿದೆ. ತನಿಖೆ ಪ್ರಗತಿಯಲ್ಲಿ ಇರುವಾಗಲೇ ಸುಂಟನೂರು ಗ್ರಾ.ಪಂ.ಗೆ ನಿಯೋಜನೆಗೊಂಡಿದ್ದಾರೆ. ₹ 7 ಲಕ್ಷ ದುರುಪಯೋಗ ಪಡಿಸಿಕೊಂಡ ಕಮರವಾಡಿ ಪಿಡಿಒ ಶೇಖಪ್ಪ ಶಂಕು ಅವರ ಮೇಲಿನ ಆರೋಪಗಳ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ತಿಳಿಸಲಾಗಿದೆ.