‘ರಾಜ್ಯದ ಜನರು ಬರ, ನೆರೆ, ಕೋವಿಡ್ ಪರಿಣಾಮಗಳಿಂದಾಗಿ ಸಂಕಷ್ಟದಲ್ಲಿದ್ದು ಪಡಿತರ ವ್ಯವಸ್ಥೆಯ ಮೂಲಕ ನೀಡುವ ದಿನಸಿಯನ್ನು ಅವಲಂಬಿಸಿದ್ದಾರೆ. ಬಿಪಿಎಲ್ ಕಾರ್ಡ್ ಮೂಲಕ ನೀಡುವ ಎರಡು ಕೆ.ಜಿ ಅಕ್ಕಿ, ಮೂರು ಕೆ.ಜಿ ಜೋಳ, ರಾಗಿಯಿಂದ ಒಬ್ಬರ ಹೊಟ್ಟೆಯಾದರೂ ತುಂಬಲು ಸಾಧ್ಯವಾ ಎಂದು ಸಚಿವರು ವಿಚಾರ ಮಾಡಬೇಕು. ಸ್ವತಃ ಅವರು ಬಿಪಿಎಲ್ ಕಾರ್ಡ್ ಮೂಲಕ ನೀಡುವ ದಿನಸಿಯನ್ನು ಒಂದು ತಿಂಗಳ ಕಾಲ ತಿಂದು ತೋರಿಸಬೇಕು’ ಎಂದು ಸವಾಲು ಹಾಕಿದ್ದಾರೆ.