ಜಾನಪದ ಹಾಡಿನ ನೃತ್ಯ ಕಲಿಕೆಯಲ್ಲಿ ತೊಡಗಿದ್ದ ಕೃಷ್ಣಾ ತಂಡದ ಚಿನ್ನರು
ಗುಬ್ಬಿ ಕಾಲೊನಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ 8 ಜನ ಅನಾಥ ಮಕ್ಕಳು ನಮ್ಮಲ್ಲಿದ್ದಾರೆ. ಇವರಿಂದ ಶುಲ್ಕ ಪಡೆದಿಲ್ಲ. ಕೆಲ ಬಡಪಾಲಕರಿಂದಲೂ ಕಡಿಮೆ ಹಣ ಪಡೆದಿದ್ದೇವೆ. 9 ಮಕ್ಕಳು ಸತತ 3–4 ವರ್ಷಗಳಿಂದ ನಮ್ಮ ಶಿಬಿರಕ್ಕೆ ಬರುತ್ತಿದ್ದಾರೆ
ರಾಜಕುಮಾರ್ ಎಸ್.ಕೆ. ರಂಗಾಯಣ ಮಕ್ಕಳ ಹಬ್ಬದ ನಿರ್ದೇಶಕ
ರಂಗಾಯಣದ ಬೇಸಿಗೆಯ ಶಿಬಿರದಲ್ಲಿ ಪಾಠ ನಿಷಿದ್ಧ. ಕೇವಲ ಆಟ ಹಾಡು ನೃತ್ಯ ನಟನೆ ಕಲಿಸುತ್ತಾರೆ. ನಟನಗೇ ಹೆಚ್ಚಿನ ಒತ್ತು ನೀಡುವುದರಿಂದ ಮಕ್ಕಳು ಮರಳಿ ಶಾಲೆಗೆ ಹೋಗುವಾಗ ಪೂರ್ತಿ ವಿಭಿನ್ನವಾಗಿ ಕಾಣುತ್ತಾರೆ
ಸುಜಾತಾ ಜಂಗಮಶೆಟ್ಟಿ ನಿರ್ದೇಶಕಿ ಕಲಬುರಗಿ ರಂಗಾಯಣ
ಕಳೆದ ವರ್ಷದಿಂದ ರಂಗ ಶಿಬಿರಕ್ಕೆ ಬರುತ್ತಿದ್ದೇನೆ. ಸ್ಮಶಾನ ಕುರುಕ್ಷೇತ್ರ ನಾಟಕದಲ್ಲಿ ನಾನು ಕುಂತಿ ಪಾತ್ರ ಮಾಡುತ್ತಿದ್ದೇನೆ. ಶಾಲೆಯ ಕಾರ್ಯಕ್ರಮಗಳಲ್ಲೂ ನಾಟಕ ಹಾಡುಗಳಲ್ಲಿ ಭಾಗವಹಿಸುತ್ತೇನೆ
ಅಶ್ವಿತಾ ಮಂಠಾಳಕರ್ 9ನೇ ತರಗತಿ ವಿದ್ಯಾರ್ಥಿನಿ
ನಾನು ಇದೇ ವರ್ಷ ರಂಗ ತರಬೇತಿ ಶಿಬಿರಕ್ಕೆ ಬಂದಿದ್ದೇನೆ. ಇಲ್ಲಿನ ವಾತಾವರಣ ಭಿನ್ನವಾಗಿದ್ದು ಅಲ್ಲಾವುದ್ದೀನನ ಅದ್ಭುತ ದೀಪ ನಾಟಕದಲ್ಲಿ ನನ್ನದು ಮಂತ್ರವಾದಿಯ ಪಾತ್ರ