ಕೊಲ್ಲೂರು ಗ್ರಾಮಕ್ಕೆ ಹೈಟೆಕ್ ಗ್ರಂಥಾಲಯ, ಸಾಮೂಹಿಕ ಶೌಚಾಲಯ ನಿರ್ಮಾಣಕ್ಕೆ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ವೇದಿಕೆ ಮೇಲೆ ಗ್ರಾ.ಪಂ. ಅಧ್ಯಕ್ಷ ಭೀಮಾಶಂಕರ ತೇಲ್ಕರ, ವೀರಣ್ಣಗೌಡ ಪರಸರೆಡ್ಡಿ, ಶಿವಾನಂದ ಪಾಟೀಲ, ಭೀಮಣ್ಣ ಸಾಲಿ, ಮಹೆಮೂದ್ ಸಾಹೇಬ್, ಅರವಿಂದ ಚವ್ಹಾಣ, ನಾಗರೆಡ್ಡಿ ಪಾಟೀಲ, ಮಲ್ಲಿನಾಥಗೌಡ ಸನ್ನತಿ, ಶರಣು ಸಾಹು ಬಿರಾಳ, ಭಾಗಪ್ಪ ಯಾದಗಿರಿ, ಸಾಯಬಣ್ಣ ಬನ್ನೇಟಿ, ಕೃಷ್ಣಾರೆಡ್ಡಿ ಹಿರೆಡ್ಡಿ, ಬಸವರಾಜ ಕೋಟಗಿರಿ, ಶರಣಗೌಡ, ಶರಣು ವಾರದ, ಕುಮಾರಗೌಡ ಪೊಲೀಸ್ ಪಾಟೀಲ, ರಮೇಶ ಹಡಪದ ಸಹಿತ ಹಲವರು ಪಾಲ್ಗೊಂಡಿದ್ದರು. ನಂತರ ಸ್ಥಳೀಯರು ಹಾಗೂ ವಿವಿಧ ಶಾಲೆಗಳ ಅತಿಥಿ ಶಿಕ್ಷಕರು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.