ಬುಧವಾರ, 10 ಡಿಸೆಂಬರ್ 2025
×
ADVERTISEMENT
ADVERTISEMENT

ಬಹುಭಾಷೆಗಳ ಅರಿವಿನಿಂದ ಜ್ಞಾನ ಸಮೃದ್ಧ: ಲೇಖಕಿ ದೀಪಾ ಬಾಸ್ತಿ ಅಭಿಮತ

Published : 10 ಡಿಸೆಂಬರ್ 2025, 6:22 IST
Last Updated : 10 ಡಿಸೆಂಬರ್ 2025, 6:22 IST
ಫಾಲೋ ಮಾಡಿ
Comments
ಬರೀ ವ್ಯಕ್ತಿಯ ವಿವರ ಕೊಡದೇ ಆ ವ್ಯಕ್ತಿಯ ಆಳವಾದ ಚೈತನ್ಯ ನೈತಿಕ ಚಡಪಡಿಕೆ ತಲ್ಲಣಗಳ ಹಿಡಿದಿಡುವುದು ಒಳ್ಳೇ ಕಾದಂಬರಿಯ ಗುಣ. ಚರಿತ್ರೆಯ ಪ್ರತಿಧ್ವನಿಯುಳ್ಳ ಮಹಾಯಾನಕ್ಕೆ ಆ ಗುಣವಿದೆ
ವಿಕ್ರಮ ವಿಸಾಜಿ ಕರ್ನಾಟಕ ಕೇಂದ್ರೀಯ ವಿವಿ ಪ್ರಾಧ್ಯಾಪಕ
ಬಾಹ್ಯಾಕಾಶದಲ್ಲಿ ಏನೆಲ್ಲ ಸಾಧಿಸಿದರೂ ದೇಶದಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣ ಸಮಾನತೆ ಗೌರವದ ಬದುಕು ಸಿಕ್ಕಾಗಲೇ ಭಾರತ ನೈಜ ಪ್ರಗತಿ ಕಾಣುತ್ತದೆ
ಪ್ರೊ.ಶಶಿಕಾಂತ ಉಡಿಕೇರಿ ಗುಲಬರ್ಗಾ ವಿವಿ ಕುಲಪತಿ
‘ಸ್ತ್ರೀ ಸಬಲೀಕರಣ ತುಡಿತ’
‘ಸಂವಿಧಾನದಲ್ಲಿರುವ ಮಹಿಳಾ ಸಬಲೀಕರಣದ ಆಶಯಗಳು ಎಲ್ಲಿಯವರೆಗೂ ಈಡೇರುವುದಿಲ್ಲವೋ ಅಲ್ಲಿಯ ತನಕವೂ ಡಾ.ಬಿ.ಆರ್‌.ಅಂಬೇಡ್ಕರ್‌ ವಿಚಾರಗಳು ಪ್ರಸ್ತುತವಾಗಿರುತ್ತವೆ’ ಎಂದು ಲೇಖಕಿ ದೀಪಾ ಭಾಸ್ತಿ ಹೇಳಿದರು. ‘ಮಹಿಳೆಯರ ಬಗೆಗೆ ಡಾ.ಬಿ.ಆರ್‌.ಅಂಬೇಡ್ಕರ್ ಅತ್ಯಂತ ಅತ್ಯಾಧುನಿಕ ಅನಿಸಿಕೆಗಳು ಪ್ರಗತಿಪರ ವಿಚಾರಗಳನ್ನು ಹೊಂದಿದ್ದರು. ಮಹಿಳೆಯರ ಸಾಮಾಜಿಕ ಶೈಕ್ಷಣಿಕ ಆರ್ಥಿಕ ರಾಜಕೀಯ ಸಮಾನತೆ ವಿಚಾರಗಳು ಇಂದೆಲ್ಲ ಪ್ರಗತಿಪರ ಎನಿಸುತ್ತವೆ. ಆದರೆ ಹಲವು ದಶಕಗಳಿಗೂ ಮುನ್ನವೇ ಡಾ.ಅಂಬೇಡ್ಕರ್ ಇವುಗಳನ್ನು ಹೇಳಿದ್ದಾರೆ’ ಎಂದರು.
‘ನಿತ್ಯವೂ ಅಪಮಾನ ತಪ್ಪಿಲ್ಲ...’
‘ಜಾತಿ ಕಾರಣಕ್ಕೆ ಬದುಕಿನಲ್ಲಿ ಇಂದಿಗೂ ಅವಮಾನ ತಪ್ಪಿಲ್ಲ’ ಎಂದು ಮಹಾಯಾನ ಕೃತಿಯ ಲೇಖಕ ಪ್ರೊ.ಎಚ್.ಟಿ.ಪೋತೆ ವಿಷಾದಿಸಿದರು. ‘ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ ಎಂಬ ಕುವೆಂಪು ಮಾತಿನಂತೆ ನಾನು ಬದುಕಲು ಪ್ರಯತ್ನಿಸಿದೆ. ಬುದ್ಧ ಬಸವ ಅಂಬೇಡ್ಕರ್‌ ಅವರನ್ನು ಪಡೆದುಕೊಂಡರೆ ಬದುಕಿನಲ್ಲಿ ಅಪಮಾನ ಕಳೆದುಕೊಳ್ಳಲು ಸಾಧ್ಯವಿದೆ. ಆದರೆ ಯುವಪೀಳಿಗೆಯಲ್ಲಿ ಯಾರೊಬ್ಬರೂ ಅಂಬೇಡ್ಕರ್ ಅವರನ್ನು ಓದದಿರುವುದು ದುರದೃಷ್ಟಕರ’ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT