ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟ ಜಾತಿಯಲ್ಲೇ ಮುಂದುವರಿಸಿ: ಬೋವಿ ಸಮಾಜದಿಂದ ಪತ್ರ ಚಳವಳಿ

Last Updated 11 ಜೂನ್ 2020, 3:41 IST
ಅಕ್ಷರ ಗಾತ್ರ

ಜೇವರ್ಗಿ : ಕೇಂದ್ರ ಸರ್ಕಾರ ಪರಿಶಿಷ್ಟ ಜಾತಿಯಲ್ಲಿ ಬರುವ ಭೋವಿ ಸಮಾಜ, ಬಂಜಾರ ಸಮಾಜ,ಕೊರಚ, ಕೊರಮ ಜಾತಿಗಳನ್ನು ಪರಿಶಿಷ್ಟ ಜಾತಿಯಲ್ಲಿಯೇ ಮುಂದುರೆಸುವಂತೆ ಆಗ್ರಹಿಸಿ ಲಂಬಾಣಿ, ಭೋವಿ, ಕೊರಚ, ಕೊರಮ ಮೀಸಲಾತಿ ಸಂರಕ್ಷಣಾ ಒಕ್ಕೂಟ ತಾಲ್ಲೂಕು ಘಟಕದ ವತಿಯಿಂದ ಬುಧವಾರ ಪತ್ರ ಚಳುವಳಿ ನಡೆಸಲಾಯಿತು.

ಈ ಎಲ್ಲಾ ಶೋಷಿತ ವರ್ಗಗಳ ಜನತೆ ಬಹುತೇಕ ಜನ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದು, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಶೋಷಿತರ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಬೇಕಾಗಿದೆ ಎಂದು ಭೋವಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಶರಣಪ್ಪ ಗುತ್ತೇದಾರ ಆಗ್ರಹಿಸಿದ್ದಾರೆ.

ನಂತರ ಭೋವಿ ಸಮಾಜ ಸೇರಿದಂತೆ ಪರಿಶಿಷ್ಟ ಜಾತಿಯಲ್ಲಿ ಬರುವ ವಿವಿಧ ಸಮಾಜಗಳ ಮುಖಂಡರು, ಪದಾಧಿಕಾರಿಗಳು ಪತ್ರ ಚಳುವಳಿ ನಡೆಸಿ ಅಂಚೆ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ರವಾನಿಸಿದರು.

ಈ ಸಂಧರ್ಭದಲ್ಲಿ ಭೋವಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಶರಣಪ್ಪ ಗುತ್ತೇದಾರ, ಭೀಮರಾಯ ಬಜಂತ್ರಿ ಹರವಾಳ, ತುಳಜಾರಾಮ ರಾಠೋಡ ಹರವಾಳ, ಶರಣು ಗುತ್ತೇದಾರ, ಲಕ್ಷ್ಮಣ ಪವಾರ ಮಾವನೂರ, ಭೀಮಾಶಂಕರ ಕುರಡೆಕರ್, ಭೀಮಾಶಂಕರ ಯಲಗೋಡ, ರವಿಚಂದ್ರ ಗುತ್ತೇದಾರ, ಸಾಯಬಣ್ಣ ಬಂಜೆಪಲ್ಲಿ, ನಿಂಗಣ್ಣ ನೆಲೋಗಿ, ಪ್ರಕಾಶ, ಹಣಮಂತ ಬಿಳವಾರ, ದಂಡಗುಲ್ಕರ್, ಡಾ.ಮಹಾದೇವಪ್ಪ, ತುಕಾರಾಮ ಜಾಧವ , ಯಮನಾಥ ಜಾಧವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT