ವಿದ್ಯುತ್ ಕಂಬಗಳ ಮೇಲೆ ಬಳ್ಳಿ ಬೆಳೆದು ವಿದ್ಯುತ್ ಪ್ರವಹಿಸುವ ತಂತಿಯವರೆಗೆ ತಲುಪಿವೆ. ಜೆಸ್ಕಾಂ ಸಿಬ್ಬಂದು ಕಂಬ, ತಂತಿಗಳಿಗೆ ತಾಗುವ ಬಳ್ಳಿಗಳ ತೆರವು ಕಾರ್ಯ ಇನ್ನೂ ನಡೆಸಿಲ್ಲ. ಸುರಕ್ಷತೆಯ ಚೌಕಟ್ಟು ಇಲ್ಲದಿರುವುದರಿಂದ ಅಪಾಯದ ಸ್ಥಿತಿ ಉಂಟಾಗಿದೆ. ಇದರಿಂದಾಗಿ ಪಟ್ಟಣ ಮತ್ತು ಗ್ರಾಮಗಳಲ್ಲಿ ಸಂಚಾರಿಸಲು ಸಾರ್ವಜನಿಕರು, ವಾಹನ ಸವಾರರು ಭಯಪಡುವಂತಾಗಿದೆ.