<p><strong>ಕಾಳಗಿ:</strong> ಲಾಕ್ಡೌನ್ ಕಾರಣ ತಾಲ್ಲೂಕಿನ ವಿವಿಧ ಗ್ರಾಮಗಳ ಜನರ ಗುರುವಾರ ಬೆಳಿಗ್ಗೆಯೇ ಪಟ್ಟಣಕ್ಕೆ ಬಂದು ಅಗತ್ಯ ವಸ್ತುಗಳನ್ನು ಖರೀದಿಸಿದರು. ಆದರೆ, ಬೈಕ್ ಮೇಲೆ ಸುತ್ತುವ ಪೋಲಿ ಹುಡುಗರಿಗೆ ಮಾತ್ರ ತಡೆ ಇಲ್ಲದಾಗಿತ್ತು.</p>.<p>ಬೆಳಿಗ್ಗೆಯಿಂದಲೇ ಸಾರಿಗೆ ಸಂಸ್ಥೆಯ ಒಂದೂ ಬಸ್ ರಸ್ತೆಗಿಳಿಯದೇ, ಬಸ್ ಘಟಕದಲ್ಲೇ ನಿಂತಿದವು. ಪಟ್ಟಣದ ಬಸ್ ನಿಲ್ದಾಣ ಬಳಿಯ ಕೋಡ್ಲಿ ಅಗಸಿಯ ಮುಖ್ಯರಸ್ತೆ, ಮಲ್ಲಿಕಾರ್ಜುನ ದೇವಸ್ಥಾನ ಬಳಿ ಮತ್ತು ಚಾವಡಿಕಟ್ಟೆ ಬಳಿ ಮುಖ್ಯರಸ್ತೆಗೆ ಅಡ್ಡಲಾಗಿ ಕಟ್ಟಿಗೆಕಟ್ಟಿ ವಾಹನ ಸಂಚರಿಸಲು ಬರದಂತೆ ಮಾಡಲಾಗಿದೆ.</p>.<p>10 ಗಂಟೆ ಬಳಿಕವೂ ಅಲ್ಲಲ್ಲಿ ಕೆಲ ಅಂಗಡಿಗಳ ಹಿಂಬಾಗಿಲು ತೆರೆದು ವ್ಯಾಪಾರ ವಹಿವಾಟು ನಡೆಸಿದ್ದರಿಂದ ಮತ್ತು ಕೆಲ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಕಾಣದೇ ಇದ್ದುದರಿಂದ ಬೈಕ್ ಸಂಚಾರ ಸಾಮಾನ್ಯವಾಗಿತ್ತು.</p>.<p>ತಹಶೀಲ್ದಾರ್ ಕಚೇರಿ, ಬಸ್ ನಿಲ್ದಾಣ, ಪಟ್ಟಣ ಪಂಚಾಯಿತಿ ಮತ್ತು ಮಸೀದಿ ಬಳಿಯ ಕೋವಿಡ್ ಸಹಾಯ ಕೇಂದ್ರಗಳು ಭಣಗಟ್ಟಿದವು.</p>.<p>ಶಾಂತಿ ಸಭೆ: ಎಎಸ್ಐ ಕುಮಾರವ್ಯಾಸ ಅವಧಾನಿ, ಮುಖ್ಯ ಕಾನ್ಸ್ಟೆಬಲ್ ನಾಗೇಂದ್ರಪ್ಪ ಹಾಗರಗಿ, ಕಾನ್ಸ್ಟೆಬಲ್ ಮಂಜುನಾಥ ಗಾಯಕವಾಡ, ರಾಜಶೇಖರ, ಪ್ರಕಾಶ ತಂಡ ಮಳಗಾ ಕೆ., ತೆಂಗಳಿಗೆ ತೆರಳಿ ಜಾತ್ರೆ ನಿಷೇಧಿಸಿ ಶಾಂತಿಸಭೆ ನಡೆಸಿ ಬಳಿಕ ಗಸ್ತು ತಿರುಗಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಳಗಿ:</strong> ಲಾಕ್ಡೌನ್ ಕಾರಣ ತಾಲ್ಲೂಕಿನ ವಿವಿಧ ಗ್ರಾಮಗಳ ಜನರ ಗುರುವಾರ ಬೆಳಿಗ್ಗೆಯೇ ಪಟ್ಟಣಕ್ಕೆ ಬಂದು ಅಗತ್ಯ ವಸ್ತುಗಳನ್ನು ಖರೀದಿಸಿದರು. ಆದರೆ, ಬೈಕ್ ಮೇಲೆ ಸುತ್ತುವ ಪೋಲಿ ಹುಡುಗರಿಗೆ ಮಾತ್ರ ತಡೆ ಇಲ್ಲದಾಗಿತ್ತು.</p>.<p>ಬೆಳಿಗ್ಗೆಯಿಂದಲೇ ಸಾರಿಗೆ ಸಂಸ್ಥೆಯ ಒಂದೂ ಬಸ್ ರಸ್ತೆಗಿಳಿಯದೇ, ಬಸ್ ಘಟಕದಲ್ಲೇ ನಿಂತಿದವು. ಪಟ್ಟಣದ ಬಸ್ ನಿಲ್ದಾಣ ಬಳಿಯ ಕೋಡ್ಲಿ ಅಗಸಿಯ ಮುಖ್ಯರಸ್ತೆ, ಮಲ್ಲಿಕಾರ್ಜುನ ದೇವಸ್ಥಾನ ಬಳಿ ಮತ್ತು ಚಾವಡಿಕಟ್ಟೆ ಬಳಿ ಮುಖ್ಯರಸ್ತೆಗೆ ಅಡ್ಡಲಾಗಿ ಕಟ್ಟಿಗೆಕಟ್ಟಿ ವಾಹನ ಸಂಚರಿಸಲು ಬರದಂತೆ ಮಾಡಲಾಗಿದೆ.</p>.<p>10 ಗಂಟೆ ಬಳಿಕವೂ ಅಲ್ಲಲ್ಲಿ ಕೆಲ ಅಂಗಡಿಗಳ ಹಿಂಬಾಗಿಲು ತೆರೆದು ವ್ಯಾಪಾರ ವಹಿವಾಟು ನಡೆಸಿದ್ದರಿಂದ ಮತ್ತು ಕೆಲ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಕಾಣದೇ ಇದ್ದುದರಿಂದ ಬೈಕ್ ಸಂಚಾರ ಸಾಮಾನ್ಯವಾಗಿತ್ತು.</p>.<p>ತಹಶೀಲ್ದಾರ್ ಕಚೇರಿ, ಬಸ್ ನಿಲ್ದಾಣ, ಪಟ್ಟಣ ಪಂಚಾಯಿತಿ ಮತ್ತು ಮಸೀದಿ ಬಳಿಯ ಕೋವಿಡ್ ಸಹಾಯ ಕೇಂದ್ರಗಳು ಭಣಗಟ್ಟಿದವು.</p>.<p>ಶಾಂತಿ ಸಭೆ: ಎಎಸ್ಐ ಕುಮಾರವ್ಯಾಸ ಅವಧಾನಿ, ಮುಖ್ಯ ಕಾನ್ಸ್ಟೆಬಲ್ ನಾಗೇಂದ್ರಪ್ಪ ಹಾಗರಗಿ, ಕಾನ್ಸ್ಟೆಬಲ್ ಮಂಜುನಾಥ ಗಾಯಕವಾಡ, ರಾಜಶೇಖರ, ಪ್ರಕಾಶ ತಂಡ ಮಳಗಾ ಕೆ., ತೆಂಗಳಿಗೆ ತೆರಳಿ ಜಾತ್ರೆ ನಿಷೇಧಿಸಿ ಶಾಂತಿಸಭೆ ನಡೆಸಿ ಬಳಿಕ ಗಸ್ತು ತಿರುಗಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>