ಕಲಬುರ್ಗಿ: ಮೊದಲ ಬಾರಿಗೆ ಪುರ ಪ್ರವೇಶ ಮಾಡಿ ನಗರದಲ್ಲಿ ವಾಸ್ತವ್ಯ ಹೂಡಿರುವ ಮಂತ್ರಾಲಯದ ಪೀಠಾಧಿಪತಿ ಸುಬುಧೇಂದ್ರತೀರ್ಥ ಶ್ರೀಪಾದರು ಭಾನುವಾರ ಬೆಳಿಗ್ಗೆ ಪ್ರಶಾಂತನಗರದ ಹನುಮಾನ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಭಕ್ತರು ಪಾದಪೂಜೆ ಮಾಡಿ ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು. ಈ ವೇಳೆ ಸ್ವಾಮೀಜಿ ಕೆಲ ಭಕ್ತರಿಗೆ ಮುದ್ರಾಧಾರಣೆ ನೀಡಿ ಆರ್ಶೀವದಿಸಿದರು.
ಗುಂಡಾಚಾರ್ಯ ನರಿಬೋಳ, ಶ್ರೀಗಳ ಪುರಪ್ರವೇಶ ಸ್ವಾಗತ ಸಮಿತಿ ಗೌರವ ಅಧ್ಯಕ್ಷ ಕೃಷ್ಣಾಜಿ ಕುಲಕರ್ಣಿ, ಕಾರ್ಯದರ್ಶಿ ನವಲಿ ಕೃಷ್ಣಚಾರ್,ಉಪಾಧ್ಯಕ್ಷ ವೆಂಕಟೇಶ ಪಾಟೀಲ ಮಳಖೇಡ, ಗುಂಡೇರಾವ ದೇಸಾಯಿ, ರಾಮದಾಸ ಹಾಗೂ ನಾರಾಯಣ ಎಂ.ಜೋಶಿ ಇದ್ದರು.