ಬೋಸರಾಜು ಪುತ್ರಿ ಎನ್.ವಾಣಿ ಹೆಸರಿನಲ್ಲಿ ಭೋಗಾವತಿ ಸೀಮೆಯಲ್ಲಿರುವ 7 ಎಕರೆ 10 ಗುಂಟೆ ಜಮೀನಿನ ಭತ್ತದ ಬೆಳೆಗೆ ₹5,046.31 ವಿಮೆ ಕಂತು ಹಣವನ್ನು ವಾಣಿ ಪಾವತಿಸಿದ್ದರು. ಅದರ ಪರಿಹಾರ ಹಣ ₹1,01,180 ಶರಣಗೌಡ ದೊಡ್ಡಬಸವನಗೌಡ ಪೊಲೀಸ್ ಪಾಟೀಲ ಎಂಬವರ ಖಾತೆಗೆ ಜಮಾ ಆಗಿದೆ. ವಾಣಿ ಅವರ ಹೆಸರಿನಲ್ಲಿರುವ ಮತ್ತೊಂದು ಜಮೀನಿನ ಪರಿಹಾರ ಹಣ ₹1,11,374.6 ಲಕ್ಷ್ಮಿದೇವಿ ಗೌಡಪ್ಪ ಅವರ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಎಂದು ದೂರುದಾರ ಶಿವಾರ್ಜುನ ನಾಯಕ ತಿಳಿಸಿದ್ದಾರೆ.