‘2021ರ ಡಿಸೆಂಬರ್ 5ರಂದು ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಬಂದ ವರದಿಯನ್ನು ನಾನು ಖುದ್ದಾಗಿ ನಿಮ್ಮ ಗಮನಕ್ಕೆ ತಂದಿದ್ದೆ. ಆದರೆ, ನೀವು ಸೌಜನ್ಯದ ಪ್ರತಿಕ್ರಿಯೆ ಕೂಡ ನೀಡಲಿಲ್ಲ. ನಾನು ಸನ್ನತಿ ಹೋಗುವ ಮೊದಲು ನಿಮ್ಮನ್ನು ಯಾವ ಸೌಜನ್ಯಕ್ಕಾಗಿ ಕೇಳಬೇಕಿತ್ತು? ಚಿತ್ತಾಪುರ ಕೂಡ ನನ್ನ ಕ್ಷೇತ್ರದ ಭಾಗವಾದ್ದರಿಂದ ಅಲ್ಲಿಗೆ ಹೋಗಲು ನನಗೆ ಯಾರ ಅಪ್ಪಣೆಯೂ ಬೇಕಾಗಿಲ್ಲ’ ಎಂದೂ ಸಂಸದ ಹೇಳಿದ್ದಾರೆ.