<p><strong>ಕಲಬುರಗಿ:</strong> ನಗರದ ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಆಯೋಜಿಸಿರುವ ‘ಕಲಬುರಗಿ ನಾಟಕೋತ್ಸವ’ ಅಂಗವಾಗಿ ಇದೇ 23ರಂದು ಸಂಜೆ 7 ಗಂಟೆಗೆ 'ಮುಖ್ಯಮಂತ್ರಿ' ನಾಟಕ ಪ್ರದರ್ಶನಗೊಳ್ಳಲಿದೆ.</p>.<p>ಮುಖ್ಯಮಂತ್ರಿ ಪಾತ್ರದಲ್ಲಿ ‘ಮುಖ್ಯಮಂತ್ರಿ’ ಚಂದ್ರು ಅಭಿನಯಿಸುವರು. ಇದು ನಾಟಕದ 886ನೇ ಪ್ರಯೋಗ. ಬೆಂಗಳೂರಿನ ಕಲಾಗಂಗೋತ್ರಿ ತಂಡವು ಕಳೆದ 45 ವರ್ಷಗಳಿಂದ ಅಧಿಕ ಮುಖ್ಯಮಂತ್ರಿ ನಾಟಕ ಪ್ರದರ್ಶಿಸುತ್ತಿದೆ. ರಣಜಿತ್ ಕಪೂರ್ ಅವರ ಹಿಂದಿ ಮೂಲದ ನಾಟಕವನ್ನು ಟಿ.ಎಸ್.ಲೋಹಿತಾಶ್ವ ಕನ್ನಡಕ್ಕೆ ತಂದಿದ್ದು, ಬಿ.ವಿ.ರಾಜಾರಾಂ ನಿರ್ದೇಶಿಸಿದ್ದಾರೆ.</p>
<p><strong>ಕಲಬುರಗಿ:</strong> ನಗರದ ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಆಯೋಜಿಸಿರುವ ‘ಕಲಬುರಗಿ ನಾಟಕೋತ್ಸವ’ ಅಂಗವಾಗಿ ಇದೇ 23ರಂದು ಸಂಜೆ 7 ಗಂಟೆಗೆ 'ಮುಖ್ಯಮಂತ್ರಿ' ನಾಟಕ ಪ್ರದರ್ಶನಗೊಳ್ಳಲಿದೆ.</p>.<p>ಮುಖ್ಯಮಂತ್ರಿ ಪಾತ್ರದಲ್ಲಿ ‘ಮುಖ್ಯಮಂತ್ರಿ’ ಚಂದ್ರು ಅಭಿನಯಿಸುವರು. ಇದು ನಾಟಕದ 886ನೇ ಪ್ರಯೋಗ. ಬೆಂಗಳೂರಿನ ಕಲಾಗಂಗೋತ್ರಿ ತಂಡವು ಕಳೆದ 45 ವರ್ಷಗಳಿಂದ ಅಧಿಕ ಮುಖ್ಯಮಂತ್ರಿ ನಾಟಕ ಪ್ರದರ್ಶಿಸುತ್ತಿದೆ. ರಣಜಿತ್ ಕಪೂರ್ ಅವರ ಹಿಂದಿ ಮೂಲದ ನಾಟಕವನ್ನು ಟಿ.ಎಸ್.ಲೋಹಿತಾಶ್ವ ಕನ್ನಡಕ್ಕೆ ತಂದಿದ್ದು, ಬಿ.ವಿ.ರಾಜಾರಾಂ ನಿರ್ದೇಶಿಸಿದ್ದಾರೆ.</p>