ಸೇಡಂ: ಪಟ್ಟಣದ ವೆಂಕಟೇಶ್ವರ ನಗರದ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ನಾಗಲಿಂಗೇಶ್ವರ ದೇವಸ್ಥಾನದಲ್ಲಿರುವ ನಾಗಲಿಂಗ ಮೂರ್ತಿಯನ್ನು ಕಿಡಿಗೇಡಿಗಳು ಮಂಗಳವಾರ ವಿಘ್ನಗೊಳಿಸಿರುವುದು ಬೆಳಕಿಗೆ ಬಂದಿದೆ.
ಲಿಂಗದ ಮೇಲೆ ನಾಗ ಹೆಡೆಗಳಿರುವ ಮೂರ್ತಿಯಿತ್ತು. ಕಿಡಗೇಡಿಗಳು ನಾಗಮೂರ್ತಿಯನ್ನು ಕೆಡವಿ ಭಗ್ನಗೊಳಿಸಿರುವ ಸ್ಥಿತಿಯಲ್ಲಿ ಮಂಗಳವಾರ ಬೆಳಿಗ್ಗೆ ಭಕ್ತರು ಪೂಜೆ ಸಲ್ಲಿಸಲು ಹೋದಾಗ ಗೊತ್ತಾಗಿದೆ.
ಮೂರ್ತಿ ವಿಘ್ನಗೊಳಿಸಿರುವುದನ್ನು ಭಕ್ತರು ಖಂಡಿಸಿ ಸೇಡಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೆ ಜಾತಿ ಮತ್ತು ಧರ್ಮದ ಹೆಸರಿನ ಮೇಲೆ ದುಷ್ಕರ್ಮಿಗಳ ಉದ್ದೇಶವಿರುವ ಅನುಮಾನವಿದೆ. ಆದಷ್ಟು ಶೀಘ್ರದಲ್ಲಿ ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಮುಖಂಡರಾದ ಪ್ರೇಮ್ ಚವಾಣ್, ಶಿವಲಿಂಗಪ್ಪ ಶೆಟ್ಟಿ, ವೀರೇಶ ನೀಲಂಗಿ, ಶಿವಕುಮಾರ ಅಪ್ಪಾಜಿ, ನಾಗರಾಜ ಹಾಬಾಳ್, ಸಚಿನ್ ಮೀನಕೇರಿ, ಅಶೋಕ ಮೆಕ್ಯಾನಿಕ ಸೇರಿದಂತೆ ಇನ್ನಿತರ ಭಕ್ತರು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.