ಕಲಬುರಗಿ: ‘ಶರಣರು ಅಷ್ಟಾವರಣಗಳನ್ನು ಅಂಗವೆಂದು, ಪಂಚಾಚಾರಗಳನ್ನು ಪ್ರಾಣವೆಂದು, ಷಟ್ಸ್ಥಲಗಳನ್ನು ಆತ್ಮವೆಂದು ಪರಿಗಣಿಸಿ ಹೊಸತತ್ವ ಚಿಂತನೆಯನ್ನು ರೂಪಿಸಿದರು. ಅವರು ಎಂದಿಗೂ ತಿಳಿಯದ ತತ್ವವನ್ನು ಸಮಾಜದ ಮೇಲೆ ಹೇರಲಿಲ್ಲ. ಕೃತಿಗಳಲ್ಲಿ ಮಾತ್ರ ಸೀಮಿತವಾಗಿರುವ ವಿಷಯಗಳನ್ನು ಎಂದೂ ಮಂಡಿಸದೆ, ನಾವು ಸ್ವತಃ ಅನುಭವಿಸಿ ನಿರ್ಣಯಿಸ ಬಹುದಾದಂತಹ ಸಂಗತಿಗಳನ್ನೇ ತತ್ವವಾಗಿಸಿದ್ದು ವಿನೂತನವಾಗಿ ಕಾಣಿಸುತ್ತದೆ’ ಎಂದು ವಿಶ್ರಾಂತ ಪ್ರಾಧ್ಯಾಪಕಿ ಡಾ.ಜಯಶ್ರೀ ದಂಡೆ ಹೇಳಿದರು.