ಕಮಲಾಪುರ; (ಕಲಬುರಗಿ ಜಿಲ್ಲೆ): ಸಿಡಿಲು ಬಡಿದು ಜೋಡೆತ್ತು ಮೃತಪಟ್ಟ ಘಟನೆ ತಾಲ್ಲೂಕಿನ ಮಳಸಾಪುರ ತಾಂಡಾದಲ್ಲಿ ಗುರುವಾರ ನಡೆದಿದೆ.
ಈ ಎತ್ತುಗಳು ಮಳಸಾಪುರ ತಾಂಡಾ ನಿವಾಸಿ ನಾತು ಘಮ್ಮು ಚವ್ಹಾಣ್ ಅವರಿಗೆ ಸೇರಿದ್ದು, ಸುಮಾರು ₹ 1.40 ಲಕ್ಷ ಮೌಲ್ಯ ಹೊಂದಿವೆ.
ಗಳೆ ಹೊಡೆದು ಮರದ ನೆರಳಿನ ಅಡಿಯಲ್ಲಿ ಎರಡೂ ಎತ್ತುಗಳನ್ನು ಕಟ್ಟಲಾಗಿತ್ತು. ಮಧ್ಯಾಹ್ನ ಏಕಾಏಕಿ ಗುಡುಗು, ಮಿಂಚು ಸಹಿತ ಮಳೆ ಆರಂಭವಾಯಿತು. ಮರಕ್ಕೆ ಸಿಡಿಲು ಬಡಿದ ಕಾರಣ ಅದರ ಅಡಿಯಲ್ಲಿ ನಿಂತಿದ್ದ ಎರಡು ಎತ್ತುಗಳು ಸ್ಥಳದಲ್ಲಿ ಮೃತಪಟ್ಟಿವೆ.