ಪ್ರದೀಪ್ ಅವರ ವಿರುದ್ಧ ನರಹರಿ ಪವೇದ, ಎಂ.ವಿಜಯ, ಎಂ.ಯಲ್ಲಪ್ಪ, ಸುರೇಶ್, ದಿಗಂಬರ ಕಾಡಪ್ಪಗೋಳ ಮತ್ತು ದಿಗಂಬರ ಡಾಂಗೆ ಸಲ್ಲಿಸಿದ ದೂರಿನ ಅರ್ಜಿಯ ವಿಚಾರಣೆ ನಡೆಸಲಾಗಿದೆ. ರವಿ ಆಲೂರ ಅವರ ಫೋನ್ ಪೇ ಮೂಲಕ ಪ್ರದೀಪ್ ಖಾತೆಗೆ ಹಣ ವರ್ಗಾವಣೆಯಾಗಿದೆ. ಪ್ರದೀಪ್ ಅವರು ರವಿ ಆಲೂರ ಜತೆಗೆ ಮರಳು ಅಕ್ರಮ ಸಾಗಾಣಿಕೆ ಸಂಬಂಧ ಮಾತನಾಡಿರುವುದು ಆಡಿಯೊ ತುಣುಕಿನಲ್ಲಿ ಕಂಡು ಬಂದಿದೆ ಎಂದು ಅಮಾನತು ಆದೇಶ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.