‘ನಿವೇಶನಕ್ಕೆ ಸಂಬಂಧಿಸಿದಂತೆ ಪಾಟೀಲ ಮತ್ತು ಗುತ್ತೇದಾರ ಕುಟುಂ ಬದ ಮಧ್ಯೆ ವರ್ಷಗಳಿಂದ ವ್ಯಾಜ್ಯವಿತ್ತು. 2018ರಲ್ಲಿ ನ್ಯಾಯಾಲಯವು ನಿವೇಶನ ಸಂತೋಷ ಪಾಟೀಲಗೆ ಸೇರಿದೆ ಎಂದು ತೀರ್ಪು ನೀಡಿತು. ಆದರೆ, ಆರೋಪಿಗಳಾದ ಬಸಯ್ಯ ಗುತ್ತೇದಾರ, ದಸ್ತಯ್ಯ ಗುತ್ತೇದಾರ, ಶಾಂತಾಬಾಯಿ ಗುತ್ತೇದಾರ, ರಾಜು ಗುತ್ತೇದಾರ ಎಂಬುವರು ನಿವೇಶನ ತಮ್ಮದೆಂದು ಕಿರಿಕಿರಿ ಮಾಡುತ್ತಿದ್ದರು’ ಎಂದು ಚನ್ನವೀರ ಪಾಟೀಲ ದೂರು ನೀಡಿದ್ದರು.