‘ಅಂಬೇಡ್ಕರ್ ಅವರ ಪುತ್ಥಳಿಗೆ ಅವಮಾನ ಮಾಡಿರುವುದು ಅಕ್ಷಮ್ಯ. ಕಿಡಿಗೇಡಿಗಳು ಯಾರೆ ಆಗಿರಲಿ ಕೂಡಲೆ ಪತ್ತೆಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಎಸ್ಪಿ ಅವರಿಗೆ ಹೇಳಿದ್ದೇನೆ. ಪುತ್ಥಳಿ ಪಕ್ಕದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಗ್ರಾಮ ಪಂಚಾಯಿತಿಯವರಿಗೆ ಸೂಚಿಸಿದ್ದೇನೆ. ಸುತ್ತಲಿನ ಆವರಣ ಹಾಗೂ ಹೊಸ ಪುತ್ಥಳಿ ನಿರ್ಮಾಣಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ’ ಎಂದು ಶಾಸಕ ಬಸವರಾಜ ತಿಳಿಸಿದ್ದಾರೆ. ಕಾಂಗ್ರೆಸ್ ಮುಖಂಡ ವಿಜಯಕುಮಾರ ಜಿ.ರಾಮಕೃಷ್ಣ, ಪ್ರಕಾಶ ಹಾಗರಗಿ, ನಿಂಗಪ್ಪ ಪ್ರಬುದ್ಧಕರ್, ಡಿ.ಕೆ.ಮದನಕರ್, ಸುಧೀರ ಹೊನ್ನಳ್ಳಿ, ವಿದ್ಯಾಧರ ಮಾಳಗೆ, ಗೋಪಾಲ ಗೊಬ್ಬರವಾಡಿ, ನಂದನಕುಮಾರ ಹರಸೂರ, ರಾಜು ಲೇಂಗಟಿ, ಸುಭಾಷ್ ಆಜಾದಪುರ, ಜಗದೇವಪ್ಪ ಅಂಕಲಗಿ, ಸಂಜುಕುಮಾರ ಪೋತೆ, ಅಶೋಕಕುಮಾರ ಗೌರೆ, ಶ್ರೀನಿವಾಸ ಹೋಳಕರ್, ಅವಿನಾಶ ಈಟಿ ಇದ್ದರು.