ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ವೆಂಕೋಬ ದೊರೆ ಮಾತನಾಡಿ, ‘ಕಾಯ್ದೆ ಪ್ರಕಾರ ಸಾಲ ಮರುಪಾವತಿಸಲು ಮೌಖಿಕವಾಗಿ ತಿಳಿಸಬೇಕು ಮನವೊಲಿಸುವ ಕೆಲಸ ಮಾಡಬೇಕು. ತಿಳಿವಳಿಕೆ 3 ನೋಟಿಸ್ ನೀಡಬೇಕು. ಸ್ಪಂದಿಸದಿದ್ದಲ್ಲಿ ಪತ್ರಿಕೆ ಪ್ರಕಟಣೆ ಮೂಲಕ ಅಂತಿಮ ನೋಟಿಸ್ ಕಳುಹಿಸಿ ನಂತರ ಅಡವಿಟ್ಟ ಸಾಮಗ್ರಿ ಮುಟ್ಟುಗೋಲು ಮಾಡಿಕೊಳ್ಳಬಹುದು. ಬಹಿರಂಗ ಹರಾಜು ಸಂದರ್ಭದಲ್ಲಿ ಸಾಲಗಾರ ಮರುಪಾವತಿಸಲು ಬಂದರೆ ಅವಕಾಶ ನೀಡಬೇಕು ಎಂಬ ನಿಯಮವಿದೆ. ಶಾಖಾ ವ್ಯವಸ್ಥಾಪಕರು ಇದ್ಯಾವುದನ್ನು ಮಾಡದೆ ಏಕಪಕ್ಷಿಯ ನಿರ್ಧಾರ ಕೈಗೊಂಡಿದ್ದು ಹರಾಜು ಪ್ರಕ್ರಿಯೆ ಮುಂದಾಗಿದ್ದಾರೆ’ ಎಂದು ದೂರಿದರು.