ಮೈಸೂರು: ‘ಚುನಾವಣೆ ದಿನಾಂಕ ಘೋಷಣೆ ಸಾಧ್ಯತೆಯ ಮಾಹಿತಿ ತಿಳಿದು ಸೋಮವಾರ ರಾತ್ರಿಯೇ ತರಾತುರಿಯಲ್ಲಿ ಕಡತಗಳಿಗೆ ಸಹಿ ಹಾಕಲಾಗಿದೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇಲ್ಲಿ ಮಂಗಳವಾರ ಆರೋಪಿಸಿದರು.
‘ಕಾಂಗ್ರೆಸ್ನವರು ರಾಜ್ಯವನ್ನು ಲೂಟಿ ಮಾಡಿದ್ದಾರೆ. ಇದಕ್ಕೆ ಸಹಕರಿಸಿದ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುತ್ತೇನೆ’ ಎಂದು ಎಚ್ಚರಿಕೆ ನೀಡಿದರು.
‘ಸಹಿ ಹಾಕಿದ ಕ್ಷಣಮಾತ್ರದಲ್ಲಿ ನನಗೆ ಮಾಹಿತಿ ಬರುತ್ತದೆ. ಒತ್ತಡಕ್ಕೆ ಮಣಿದು ಕಡತಗಳಿಗೆ ಕಾನೂನುಬಾಹಿರವಾಗಿ ಸಹಿ ಹಾಕಿರುವ ಅಧಿಕಾರಿಗಳು ಜೈಲಿಗೆ ಹೋಗಲು ಸಿದ್ಧರಾಗಿ’ ಎಂದರು.
**
ರಾಜ್ಯ ವಿಧಾನಸಭೆಗೆ ಒಂದೇ ಹಂತದಲ್ಲಿ ಮತದಾನಕ್ಕೆ ಮುಂದಾಗಿರುವ ತೀರ್ಮಾನವನ್ನು ಸ್ವಾಗತಿಸುತ್ತೇನೆ. ವೇಳಾಪಟ್ಟಿ ಬಗ್ಗೆ ಅಚ್ಚರಿಯೇನೂ ಆಗಿಲ್ಲ – ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ