‘ಕಳೆದ ನಾಲ್ಕು ದಿನಗಳಿಂದ ಪುಟ್ಟಿ ಸರಿಯಾಗಿ ಊಟ ಮಾಡುತ್ತಿಲ್ಲ, ರಾತ್ರಿ ನಿದ್ರೆ ಮಾಡುತ್ತಿಲ್ಲ. ತನ್ನ ಅವ್ವ ಯಾವಾಗ ಮನೆಗೆ ಬರುತ್ತಾಳೆ ಎಂದು ಕೇಳುತ್ತಿದ್ದಾಳೆ. ಇವತ್ತು ಪೊಲೀಸರು ಜ್ಞಾನಜ್ಯೋತಿ ಶಾಲೆಗೆ ಅವರನ್ನು ಕರೆತರುತ್ತಾರೆ ಎಂಬ ಸುದ್ದಿ ಕೇಳಿ, ಮಗಳನ್ನು ನಾನೇ ಇಲ್ಲಿಗೆ ಕರೆತಂದೆ. ತಾಯಿ ಪೊಲೀಸ್ ವಾಹನದಲ್ಲಿ ಹತ್ತುವಾಗ ದೂರದಿಂದಲೇ ನೋಡಿದ್ದಾಳೆ’ ಎಂದು ಅವರ ಸಂಬಂಧಿ ಹೇಳಿದರು.