ಮಾದನಹಿಪ್ಪರಗಾದ ಶ್ರೀಶೈಲ ಸಿದ್ಧಪ್ಪ ವಗ್ಗಿ ಶಿಕ್ಷೆಗೆ ಒಳಗಾದ ವ್ಯಕ್ತಿ. ಇದೇ ಗ್ರಾಮದ ಮಲ್ಲಿನಾಥ ಎನ್ನುವವರನ್ನು ಚಾಕು ಇರಿದು ಕೊಲೆ ಮಾಡಿದ್ದ. ಇದನ್ನು ಕಂಡು ಮಲ್ಲಿನಾಥ ಅವರ ಸಹೋದರ ಶಾಂತಮಲ್ಲಪ್ಪ ನಿಂಗಣ್ಣ ಜಿಡ್ಡಿಮನಿ ಅವರು ದೂರು ನೀಡಿದ್ದರು. ಆಳಂದ ಸಿಪಿಐ ಎಚ್.ಬಿ. ಸಣ್ಣಮನಿ ಅವರು ಆರೋಪಿಯನ್ನು ಬಂಧಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.