ಘಟನೆಯ ವಿವರ: ಸಣ್ಣೂರಕರ್ ಕುಟುಂಬದವರ ಮನೆಯ ಬಚ್ಚಲು ನೀರು ಭಾಗೋಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಆಚೆಗಿನ ಚರಂಡಿಗೆ ಸೇರಿಸುವ ಕುರಿತು ಅಪ್ಪೊಜಿ ಕುಟುಂಬದವರಿಂದ ತಕರಾರು ಉಂಟಾಗಿತ್ತು. ನಂತರ ಸಣ್ಣೂರಕರ್ ಕುಟುಂಬದವರ ಮತ್ತು ಸಂಗಾವಿ ಕುಟುಂಬದವರ ನಡುವೆ ಜಗಳ ಶುರುವಾಗಿ ಮಾರಕಾಸ್ತ್ರ ಝಳಪಿಸುವ ಹಂತಕ್ಕೆ ತಿರುಗಿ ಭೀಕರವಾಗಿ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.