ಮಳೆ ಆರಂಭಕ್ಕೂ ಮುನ್ನ ಬಿರುಗಾಳಿ ಬೀಸಿತು. ಇದರಿಂದಾಗಿ, ರಂಗಮಂದಿರ ಆವರಣದಲ್ಲಿನ ಎರಡು ಮರಗಳು ನೆಲಕ್ಕುರುಳಿದವು. ಜಗತ್ ವೃತ್ತದ ಬಳಿ ಇರುವ ಯಲ್ಲಮ್ಮ ದೇವಸ್ಥಾನದ ಬಳಿ ವಿದ್ಯುತ್ ಕಂಬವು ಬಾಗಿದ್ದರಿಂದ ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಹೀಗಾಗಿ, ತಕ್ಷಣವೇ ಜೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ನಂತರ ಕಂಬ ಮೇಲೆತ್ತುವ ಕಾರ್ಯಾಚರಣೆ ನಡೆಸಿದರು.