<p><strong>ಕಲಬುರಗಿ</strong>: ಗ್ರಾಮೀಣ ಪರಿಸರದಲ್ಲಿ ರಂಗಕಲೆಯನ್ನು ಉಳಿಸಿ ಬೆಳೆಸುತ್ತಿರುವ ಕಲಾವಿದರಿಗೆ ರಂಗ ಗೌರವ ನೀಡುವ ಉತ್ತಮ ಕೆಲಸವನ್ನು ರಂಗಾಯಣ ಮಾಡುತ್ತಿದೆ ಎಂದು ಹಿರಿಯ ಕಲಾವಿದೆ ಮಂಜುಳಾ ಜಾನೆ ಹೇಳಿದರು.</p>.<p>ರಂಗಾಯಣ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವರಂಗಭೂಮಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ಬಗೆಯ ರಂಗ ಪ್ರಕಾರಗಳಲ್ಲಿ ಕಾರ್ಯಕ್ರಮ ರೂಪಿಸುತ್ತಿರುವ ಕಲಬುರಗಿ ರಂಗಾಯಣ ನಾಡಿನಾದ್ಯಂತ ಗುರುತಿಸುವ ಕೆಲಸ ಮಾಡಿದೆ ಎಂದರು.</p>.<p>ಚಿತ್ತಾಪುರ ತಾಲೂಕಿನ ಅಳ್ಳೊಳ್ಳಿಯ ನಾಗೇಂದ್ರ ನಾಟ್ಯ ಸಂಘದ ರೂವಾರಿ ನಾಗಪ್ಪಯ್ಯ ಸ್ವಾಮಿ ಅವರಿಗೆ ರಂಗ ಗೌರವ ಸಲ್ಲಿಸಲಾಯಿತು. ನಂತರ ಮಾತನಾಡಿದ ಸ್ವಾಮಿಗಳು, ಹಳ್ಳಿಯೊಂದರಲ್ಲಿ ನನ್ನ ಪಾಡಿಗೆ ನಾನು ನಾಟಕಗಳಿಗೆ ಸಂಗೀತ ನೀಡುತ್ತಾ ಬಂದಿರುವುದನ್ನು ಗುರುತಿಸಿದ ರಂಗಾಯಣಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.</p>.<p>ಮುಖ್ಯ ಅತಿಥಿಯಾಗಿ ದೂರದರ್ಶನ ಕೇಂದ್ರದ ನಿವೃತ್ತ ನಿರ್ದೇಶಕ ಎಂ.ಬಿ. ಪಾಟೀಲ, ರೇಖಾ ನಾಗಪ್ಪಯ್ಯ ಉಪಸ್ಥಿತರಿದ್ದರು.</p>.<p>ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಜಗದೀಶ್ವರಿ ಶಿವಕೇರಿ ಸ್ವಾಗತಿಸಿದರು.</p>.<p>ಡಾ.ಸಂದೀಪ ನಿರೂಪಣೆ ಮಾಡಿದರು. ವಿಶ್ವರಂಗಭೂಮಿ ಸಂದೇಶವನ್ನು ರಂಗನಿರ್ದೇಶಕ ವಿಶ್ವರಾಜ ಪಾಟೀಲ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ಗ್ರಾಮೀಣ ಪರಿಸರದಲ್ಲಿ ರಂಗಕಲೆಯನ್ನು ಉಳಿಸಿ ಬೆಳೆಸುತ್ತಿರುವ ಕಲಾವಿದರಿಗೆ ರಂಗ ಗೌರವ ನೀಡುವ ಉತ್ತಮ ಕೆಲಸವನ್ನು ರಂಗಾಯಣ ಮಾಡುತ್ತಿದೆ ಎಂದು ಹಿರಿಯ ಕಲಾವಿದೆ ಮಂಜುಳಾ ಜಾನೆ ಹೇಳಿದರು.</p>.<p>ರಂಗಾಯಣ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವರಂಗಭೂಮಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ಬಗೆಯ ರಂಗ ಪ್ರಕಾರಗಳಲ್ಲಿ ಕಾರ್ಯಕ್ರಮ ರೂಪಿಸುತ್ತಿರುವ ಕಲಬುರಗಿ ರಂಗಾಯಣ ನಾಡಿನಾದ್ಯಂತ ಗುರುತಿಸುವ ಕೆಲಸ ಮಾಡಿದೆ ಎಂದರು.</p>.<p>ಚಿತ್ತಾಪುರ ತಾಲೂಕಿನ ಅಳ್ಳೊಳ್ಳಿಯ ನಾಗೇಂದ್ರ ನಾಟ್ಯ ಸಂಘದ ರೂವಾರಿ ನಾಗಪ್ಪಯ್ಯ ಸ್ವಾಮಿ ಅವರಿಗೆ ರಂಗ ಗೌರವ ಸಲ್ಲಿಸಲಾಯಿತು. ನಂತರ ಮಾತನಾಡಿದ ಸ್ವಾಮಿಗಳು, ಹಳ್ಳಿಯೊಂದರಲ್ಲಿ ನನ್ನ ಪಾಡಿಗೆ ನಾನು ನಾಟಕಗಳಿಗೆ ಸಂಗೀತ ನೀಡುತ್ತಾ ಬಂದಿರುವುದನ್ನು ಗುರುತಿಸಿದ ರಂಗಾಯಣಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.</p>.<p>ಮುಖ್ಯ ಅತಿಥಿಯಾಗಿ ದೂರದರ್ಶನ ಕೇಂದ್ರದ ನಿವೃತ್ತ ನಿರ್ದೇಶಕ ಎಂ.ಬಿ. ಪಾಟೀಲ, ರೇಖಾ ನಾಗಪ್ಪಯ್ಯ ಉಪಸ್ಥಿತರಿದ್ದರು.</p>.<p>ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಜಗದೀಶ್ವರಿ ಶಿವಕೇರಿ ಸ್ವಾಗತಿಸಿದರು.</p>.<p>ಡಾ.ಸಂದೀಪ ನಿರೂಪಣೆ ಮಾಡಿದರು. ವಿಶ್ವರಂಗಭೂಮಿ ಸಂದೇಶವನ್ನು ರಂಗನಿರ್ದೇಶಕ ವಿಶ್ವರಾಜ ಪಾಟೀಲ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>