ಸೋಮವಾರ ಬೆಳಿಗ್ಗೆ 6.30ರ ಸುಮಾರಿಗೆ ಮುಗುಳನಾಗಾವಿ ಕ್ರಾಸ್ ಬಳಿ ದಾರಿಹೋಕರನ್ನು ಅಡ್ಡಗಟ್ಟಿ ಅವರಿಂದ ಹಣ, ಬಂಗಾರ, ಬೆಲೆ ಬಾಳುವ ವಸ್ತುಗಳನ್ನು ದೋಚುವ ಉದ್ದೇಶದಿಂದ ಹೊಂಚು ಹಾಕುತ್ತಿದ್ದ ದೇವಲ ಗಾಣಗಾಪುರದ ಹಣಮಂತ ಬಸಣ್ಣ ಕೋಳೆಕರ, ಅರುಣಕುಮಾರ ಶಿವಾಜಿ ಹೊನ್ನೂರ, ಭಂಕೂರ ಶಾಂತನಗರದ ಜಗನ್ನಾಥ ಈಶ್ವರಪ್ಪ ಕಣಮೇಶ್ವರ, ಶ್ರೀಧರ ಮಹೇಶ ಧನ್ನಾ, ಕಲಬುರಗಿಯ ಶಹಾಬಜಾರದ ವಿಶಾಲ ಸುಭಾಷ ನಿಲೂರಕರ್, ಭೂತಪೂರದ ಸುನೀಲ ಚಂದ್ರಕಾಂತ ಮಂತಟ್ಟಿ, ಶಹಾಬಾದ ನಿಜಾಮ ಬಜಾರದ ಚಂದ್ರಕಾಂತ ತುಕಾರಾಮ ಬುರಲೆ, ಬಿರಾಳದ ವಜೀರ ದ್ಯಾವಪ್ಪ ಗೋಗಿ, ನಾವದಗಿಯ ಪರ್ವತರೆಡ್ಡಿ ಬಸವರೆಡ್ಡಿ ಎಂಬುವರನ್ನು ಪಿಐ ನಟರಾಜ ಲಾಡೆ, ಕಾಳಗಿ ಸಿಪಿಐ ಅಮೋಜ ಕಾಂಬಳೆ, ಪಿಎಸ್ಐ ಸುದರ್ಶನ ರೆಡ್ಡಿ, ಸಿಬ್ಬಂದಿ ದಾಳಿ ನಡೆಸಿ, 9 ಆರೋಪಿಗಳನ್ನು ಬಂಧಿಸಿದ್ದಾರೆ.