‘ಡಿ.10ರಂದು ಬೀದರ್, ಯಾದಗಿರಿ ಜಿಲ್ಲೆಯ ಸಮಾಜದ ಮುಖಂಡರು ಕಲಬುರಗಿಯಲ್ಲಿ ಸೇರಲಿದ್ದಾರೆ. ಅಲ್ಲಿಂದ ಬೈಕ್ ಮೂಲಕ ಜೇವರ್ಗಿ, ಸಿಂದಗಿ ಮಾರ್ಗವಾಗಿ ವಿಜಯಪುರಕ್ಕೆ ತೆರಳಿ ಅಲ್ಲಿನ ಸರ್ಕಾರಿ ಬಾಲಕರ ವಸತಿ ನಿಲಯದಲ್ಲಿ ವಾಸ್ತವ್ಯ ಮಾಡಲಾಗುವುದು. ಅಲ್ಲಿಂದ ಮುಧೋಳಕ್ಕೆ ತಲುಪಿ ಅಲ್ಲಿ ರಾತ್ರಿ ವಾಸ್ತವ್ಯ ಮಾಡಲಿದ್ದೇವೆ. ಡಿ.12ರಂದು ಮುಧೋಳದಿಂದ ಹೊರಟು ಲೋಕಾಪುರ, ಯರಗಟ್ಟಿ ಮಾರ್ಗವಾಗಿ ಬೆಳಗಾವಿ ರಾತ್ರಿ ತಲುಪಲಿದ್ದೇವೆ. 13ರಂದು ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ಹೇಳಿದರು.