ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಮಳೆಗಾಲದಲ್ಲಿ ಸೋರುವ ಶಾಲೆಗಳು: ಹಳೆ ಕಟ್ಟಡಗಳ ನಿರ್ವಹಣೆಯದ್ದೆ ಸಮಸ್ಯೆ

ವಿದ್ಯಾರ್ಥಿಗಳ ಆಟಕ್ಕಿಲ್ಲ ಮೈದಾನ
Published : 15 ಆಗಸ್ಟ್ 2024, 7:41 IST
Last Updated : 15 ಆಗಸ್ಟ್ 2024, 7:41 IST
ಫಾಲೋ ಮಾಡಿ
Comments
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ತೆರಳುವ ದಾರಿಯಲ್ಲಿ ನೀರು ನಿಂತು ಕೆಸರುಮಯವಾಗಿರುತ್ತದೆ. ಪಟ್ಟಣದ ಹೋಳಿತಿಪ್ಪಿ ಬಡಾವಣೆಯ ಶಾಲೆ ಶಿಥಿಲಗೊಂಡಿದ್ದು ಹೊಸ ಕಟ್ಟಡ ನಿರ್ಮಿಸಬೇಕು.
– ಶ್ರೀಮಂತ ಆವಂಟಿ, ಸಾಮಾಜಿಕ ಕಾರ್ಯಕರ್ತ
ನೀಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೋಣೆಗಳು ಮಳೆಗಾಲದಲ್ಲಿ ಸೋರುತ್ತಿದ್ದು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಶೌಚಾಲಯ ಸೇರಿದಂತೆ ಹೊಸ ಕೋಣೆಗಳನ್ನು ನಿರ್ಮಿಸಬೇಕು.
– ದೇವಪ್ಪ ನಾಯಿಕೋಡಿ, ಎಸ್‌ಡಿಎಂಸಿ ಅಧ್ಯಕ್ಷ
ತಾಲ್ಲೂಕಿನಲ್ಲಿ ಶಿಥಿಲಗೊಂಡ ಶಾಲಾ ಕೋಣೆಗಳ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 45 ಕೋಣೆಗಳ ನಿರ್ಮಾಣಕ್ಕೆ ಕೆಕೆಆರ್‌ಡಿಬಿ ವತಿಯಿಂದ ಮಂಜೂರಾತಿ ಸಿಕ್ಕಿದೆ.
–ಮಾರುತಿ ಹುಜರಾತಿ, ಕ್ಷೇತ್ರ ಶಿಕ್ಷಣಾಧಿಕಾರಿ
45 ಕೋಣೆಗಳ ನಿರ್ಮಾಣಕ್ಕೆ ಕೆಕೆಆರ್‌ಡಿಬಿ ಅನುಮೋದನೆ
‘ಸೇಡಂ ತಾಲ್ಲೂಕಿನ ವಿವಿಧ ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿನ ಕೋಣೆಗಳ ದುರಸ್ತಿ ಹಾಗೂ ನೂತನ ಕೋಣೆಗಳ ನಿರ್ಮಾಣಕ್ಕೆ ಕೆಕೆಆರ್‌ಡಿಬಿ ಅನುಮೋದನೆ ನೀಡಿದ್ದು 45ಕ್ಕೂ ಅಧಿಕ ಹೊಸ ಕೋಣೆಗಳು ನಿರ್ಮಾಣವಾಗಲಿವೆ. ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ಸಹಕಾರದಿಂದ ಮಂಜೂರಾತಿ ಸಿಕ್ಕಿದೆ. ಅನುದಾನ ಬಿಡುಗಡೆ ಟೆಂಡರ್ ಹಂತದಲ್ಲಿದ್ದು ಮುಂದಿನ ದಿನಗಳಲ್ಲಿ ಕಾರ್ಯ ಪ್ರಾರಂಭವಾಗಲಿದೆ’ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಮಾರುತಿ ಹುಜರಾತಿ ತಿಳಿಸಿದರು.
ಬಿಇಒ ಕಚೇರಿಗೆ ತೆರಳುವುದೇ ಸಮಸ್ಯೆ!
ಸೇಡಂ ಪಟ್ಟಣದಲ್ಲಿ ಹಳೆ ಕ್ಷೇತ್ರಶಿಕ್ಷಣಾಧಿಕಾರಿ ಕಚೇರಿ ಕಟ್ಟಡ ಉರುಳಿಸಿ ಹೊಸ ಕಟ್ಟಡ ನಿರ್ಮಿಸಲಾಗುತ್ತಿದೆ. ತಾತ್ಕಾಲಿಕವಾಗಿ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ಬಿಇಒ ಕಚೇರಿ ಕಾರ್ಯನಿರ್ವಹಿಸುತ್ತಿದ್ದು ಕಚೇರಿಗೆ ತೆರಳುವ ರಸ್ತೆಯು ಮಳೆ ನೀರು ನಿಂತು ಕೆಸರಮಯವಾಗುತ್ತದೆ. ಮಳೆಗಾಲದಲ್ಲಿ ಕಚೇರಿಯ ಕೆಲ ಕಡೆ ಸೋರುತ್ತದೆ. ಇದರಿಂದ ಸಾರ್ವಜನಿಕರು ಪರದಾಡುತ್ತಿದ್ದು ಆದಷ್ಟು ಶೀಘ್ರವೇ ಕಚೇರಿ ನಿರ್ಮಿಸಬೇಕು’ ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT