ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ‘ಶಿವರಾತ್ರಿಯ ಸಂದರ್ಭದಲ್ಲಿ ಜಿಲ್ಲೆಯ ರಂಗಾಸಕ್ತರಿಗಾಗಿ ಐದು ದಿನಗಳ ನಾಟಕೋತ್ಸವವನ್ನು ಆಯೋಜಿಸಲಾಗಿದೆ. ಮಾ 15ರವರೆಗೆ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ನಾಟಕಗಳ ಪ್ರದರ್ಶನ ಇರಲಿದೆ. ನಂತರದ ರಂಗ ಪ್ರಯೋಗಗಳು ರಂಗಾಯಣದ ಬಯಲು ರಂಗಮಂದಿರದಲ್ಲೇ ನಡೆಯಲಿವೆ. ರಂಗಾಸಕ್ತರು ಅಲ್ಲಿಗೆ ಬಂದು ನಾಟಕ ನೋಡಿ ಪ್ರೋತ್ಸಾಹಿಸಬೇಕು’ ಎಂದು ಮನವಿ ಮಾಡಿದರು.