<p><strong>ಚಿಂಚೋಳಿ</strong>: ತಾಲ್ಲೂಕಿನಲ್ಲಿ ನಿರೀಕ್ಷಿತ ಮಳೆಯಾಗದಿದ್ದರೂ ರೈತರು ಮುಂಗಾರಿನ ಉದ್ದು, ಹೆಸರು, ತೊಗರಿ, ಸೋಯಾ ಮೊದಲಾದ ಬೀಜಗಳ ಬಿತ್ತನೆ ನಡೆಸಿದ್ದಾರೆ.</p>.<p>ಐನೋಳ್ಳಿ, ಭೋಗಾನಿಂಗದಳ್ಳಿ ಹಾಗೂ ಚಿಮ್ಮನಚೋಡ ಸುತ್ತಲೂ ಮಳೆಯ ಕೊರತೆಯಿಂದ ಸೋಯಾ ಬೀಜ ನಿರೀಕ್ಷೆಯಂತೆ ಮೊಳಕೆ ಬಂದಿಲ್ಲ ಎಂದು ರೈತ ಶಂಕರ ಸೂಗೂರು ತಿಳಿಸಿದ್ದಾರೆ.</p>.<p>ತೊಗರಿ ಬಿತ್ತನೆ ಮಾಡಿದ ಹೊಲದಲ್ಲಿ ಕಾಡುಹಂದಿಗಳ ಕಾಟ ಹೆಚ್ಚಾಗಿದ್ದು ರೈತರು ಬೀಜ ಬಿತ್ತಿ ಮನೆಗೆ ಬಂದರೆ ರಾತ್ರಿ ಕಾಡುಹಂದಿಗಳು ಬಿತ್ತಿದ ಹೊಲದಲ್ಲಿ ಕಾಳು ತಿಂದು ಹಾಕುತ್ತಿವೆ. ಇದರಿಂದ ರೈತರು ಹೊಲದಲ್ಲಿಯೇ ಮಲಗುವಂತಾಗಿದೆ ಎಂದು ಹೀರಾಸಿಂಗ್ ತಿಳಿಸಿದರು.</p>.<p>ಜೂನ್ ತಿಂಗಳಲ್ಲಿ ತಾಲ್ಲೂಕಿನಲ್ಲಿ ಸುರಿದ ಮಳೆಯ ಸರಾಸರಿ ನೋಡಿದರೆ ಶೇ 10 ಕೊರತೆಯಿದೆ. ಚಿಂಚೋಳಿ ಹೋಬಳಿ ಶೇ 20, ಐನಾಪುರ ಹೋಬಳಿಯಲ್ಲಿ ಶೇ 8 ಅಧಿಕ ಮಳೆಯಾಗಿದೆ. ಸುಲೇಪೇಟ ಹೋಬಳಿಯಲ್ಲಿ ಶೇ 53, ಕೋಡ್ಲಿಯಲ್ಲಿ ಶೇ 13 ಮಳೆಯ ಕೊರತೆಯಿದೆ ಎಂದು ಸಹಾಯಕ ಕೃಷಿ ನಿರ್ದೆಶಕ ವೀರಶೆಟ್ಟಿ ರಾಠೋಡ್ ತಿಳಿಸಿದ್ದಾರೆ.</p>.<p>ತಾಲ್ಲೂಕಿನಲ್ಲಿ ಸದ್ಯ ಶೇ 80 ಬಿತ್ತನೆಯಾಗಿದೆ. ತಗ್ಗು ಪ್ರದೇಶದ ಬೆಳೆ ಚನ್ನಾಗಿವೆ ಆದರೆ ಇತರ ಪ್ರದೇಶದ ಬೆಳೆಗಳಿಗೆ ಮಳೆಯ ಅಗತ್ಯವಿದೆ ಎಂದರು.</p>.<p>ತಾಲ್ಲೂಕಿನಲ್ಲಿ ಐನಾಪುರ ಸುತ್ತಮುತ್ತ ಹಾಗೂ ಚಿಂಚೋಳಿ ಹೋಬಳಿಯಲ್ಲಿ ಬೆಳೆ ಉತ್ತಮವಾಗಿದ್ದು ಬೆಳವಣಿಗೆ ಹಂತದಲ್ಲಿವೆ. <br> ಅತ್ಯಂತ ಫಲವಂತಾದ ಕಪ್ಪು ಮಣ್ಣಿನ ಭೂಮಿಯಲ್ಲಿ ವಾರದ ಹಿಂದಷ್ಟೆ ಬಿತ್ತನೆ ನಡೆಸಿದರೆ, ಉಳಿದ ಕಡೆಗಳಲ್ಲಿ 15-20 ದಿನಗಳ ಹಿಂದೆ ಬಿತ್ತನೆ ನಡೆಸಿದ್ದು ಬೆಳೆಗಳು ಉತ್ತಮ ಬೆಳವಣಿಗೆ ಹಂತದಲ್ಲಿವೆ.</p>.<p>ಎಲ್ಲೆಡೆ ರೈತರು ಹೊಲದಲ್ಲಿ ಎಡೆ ಹೊಡೆಯುವ, ಕಳೆ ಕೀಳುವ ಕೆಲಸದಲ್ಲಿ ನಿರತರಾಗಿದ್ದಾರೆ. ಜೂನ್ ಎರಡನೇ ವಾರದಲ್ಲಿ ಬಿತ್ತಿದ ರೈತರ ಹೊಲದಲ್ಲಿ ಬೆಳೆ ಚನ್ನಾಗಿದ್ದರೆ, ವಾರದ ಹಿಂದೆ ಬಿತ್ತಿದ ಹೊಲದಲ್ಲಿ ಪೈರು ಸಾಲು ಹರಿದಿವೆ.<br><br></p>.<div><blockquote>ಜೂನ್ ಎರಡನೇ ವಾರದಲ್ಲಿ ಬಿತ್ತನೆ ಮಾಡಿದ್ದು ಈಗ ಬೆಳವಣಿಗೆ ಹಂತದಲ್ಲಿದೆ. ತೇವಾಂಶ ನಿರ್ವಹಣೆ ಮತ್ತು ಕಳೆ ನಿಯಂತ್ರಣಕ್ಕೆ ಎಡೆ ಹೊಡೆಯುತ್ತಿದ್ದೇವೆ.</blockquote><span class="attribution">- ಗೋಪಾಲ ಜಾಧವ , ರೈತ ಕಲಭಾವಿ ತಾಂಡಾ</span></div>.<div><blockquote>ರೈತರು ತಮ್ಮ ಹೊಲದಲ್ಲಿ ಬಿತ್ತಿದ ಬೆಳೆಗಳಿಗೆ ವಿಮೆ ನೋಂದಾಯಿಸಲು ಜುಲೈ 31 ಕೊನೆಯ ದಿನವಾಗಿದೆ. ಹವಾಮಾನದಲ್ಲಿ ಏರುಪೇರಾಗುತ್ತಿರುವುದರಿಂದ ವಿಮೆ ಮಾಡಿಸುವುದು ಸೂಕ್ತ </blockquote><span class="attribution">-ವೀರಶೆಟ್ಟಿ ರಾಠೋಡ್, ಕೃಷಿ ಸಹಾಯಕ ನಿರ್ದೇಶಕ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂಚೋಳಿ</strong>: ತಾಲ್ಲೂಕಿನಲ್ಲಿ ನಿರೀಕ್ಷಿತ ಮಳೆಯಾಗದಿದ್ದರೂ ರೈತರು ಮುಂಗಾರಿನ ಉದ್ದು, ಹೆಸರು, ತೊಗರಿ, ಸೋಯಾ ಮೊದಲಾದ ಬೀಜಗಳ ಬಿತ್ತನೆ ನಡೆಸಿದ್ದಾರೆ.</p>.<p>ಐನೋಳ್ಳಿ, ಭೋಗಾನಿಂಗದಳ್ಳಿ ಹಾಗೂ ಚಿಮ್ಮನಚೋಡ ಸುತ್ತಲೂ ಮಳೆಯ ಕೊರತೆಯಿಂದ ಸೋಯಾ ಬೀಜ ನಿರೀಕ್ಷೆಯಂತೆ ಮೊಳಕೆ ಬಂದಿಲ್ಲ ಎಂದು ರೈತ ಶಂಕರ ಸೂಗೂರು ತಿಳಿಸಿದ್ದಾರೆ.</p>.<p>ತೊಗರಿ ಬಿತ್ತನೆ ಮಾಡಿದ ಹೊಲದಲ್ಲಿ ಕಾಡುಹಂದಿಗಳ ಕಾಟ ಹೆಚ್ಚಾಗಿದ್ದು ರೈತರು ಬೀಜ ಬಿತ್ತಿ ಮನೆಗೆ ಬಂದರೆ ರಾತ್ರಿ ಕಾಡುಹಂದಿಗಳು ಬಿತ್ತಿದ ಹೊಲದಲ್ಲಿ ಕಾಳು ತಿಂದು ಹಾಕುತ್ತಿವೆ. ಇದರಿಂದ ರೈತರು ಹೊಲದಲ್ಲಿಯೇ ಮಲಗುವಂತಾಗಿದೆ ಎಂದು ಹೀರಾಸಿಂಗ್ ತಿಳಿಸಿದರು.</p>.<p>ಜೂನ್ ತಿಂಗಳಲ್ಲಿ ತಾಲ್ಲೂಕಿನಲ್ಲಿ ಸುರಿದ ಮಳೆಯ ಸರಾಸರಿ ನೋಡಿದರೆ ಶೇ 10 ಕೊರತೆಯಿದೆ. ಚಿಂಚೋಳಿ ಹೋಬಳಿ ಶೇ 20, ಐನಾಪುರ ಹೋಬಳಿಯಲ್ಲಿ ಶೇ 8 ಅಧಿಕ ಮಳೆಯಾಗಿದೆ. ಸುಲೇಪೇಟ ಹೋಬಳಿಯಲ್ಲಿ ಶೇ 53, ಕೋಡ್ಲಿಯಲ್ಲಿ ಶೇ 13 ಮಳೆಯ ಕೊರತೆಯಿದೆ ಎಂದು ಸಹಾಯಕ ಕೃಷಿ ನಿರ್ದೆಶಕ ವೀರಶೆಟ್ಟಿ ರಾಠೋಡ್ ತಿಳಿಸಿದ್ದಾರೆ.</p>.<p>ತಾಲ್ಲೂಕಿನಲ್ಲಿ ಸದ್ಯ ಶೇ 80 ಬಿತ್ತನೆಯಾಗಿದೆ. ತಗ್ಗು ಪ್ರದೇಶದ ಬೆಳೆ ಚನ್ನಾಗಿವೆ ಆದರೆ ಇತರ ಪ್ರದೇಶದ ಬೆಳೆಗಳಿಗೆ ಮಳೆಯ ಅಗತ್ಯವಿದೆ ಎಂದರು.</p>.<p>ತಾಲ್ಲೂಕಿನಲ್ಲಿ ಐನಾಪುರ ಸುತ್ತಮುತ್ತ ಹಾಗೂ ಚಿಂಚೋಳಿ ಹೋಬಳಿಯಲ್ಲಿ ಬೆಳೆ ಉತ್ತಮವಾಗಿದ್ದು ಬೆಳವಣಿಗೆ ಹಂತದಲ್ಲಿವೆ. <br> ಅತ್ಯಂತ ಫಲವಂತಾದ ಕಪ್ಪು ಮಣ್ಣಿನ ಭೂಮಿಯಲ್ಲಿ ವಾರದ ಹಿಂದಷ್ಟೆ ಬಿತ್ತನೆ ನಡೆಸಿದರೆ, ಉಳಿದ ಕಡೆಗಳಲ್ಲಿ 15-20 ದಿನಗಳ ಹಿಂದೆ ಬಿತ್ತನೆ ನಡೆಸಿದ್ದು ಬೆಳೆಗಳು ಉತ್ತಮ ಬೆಳವಣಿಗೆ ಹಂತದಲ್ಲಿವೆ.</p>.<p>ಎಲ್ಲೆಡೆ ರೈತರು ಹೊಲದಲ್ಲಿ ಎಡೆ ಹೊಡೆಯುವ, ಕಳೆ ಕೀಳುವ ಕೆಲಸದಲ್ಲಿ ನಿರತರಾಗಿದ್ದಾರೆ. ಜೂನ್ ಎರಡನೇ ವಾರದಲ್ಲಿ ಬಿತ್ತಿದ ರೈತರ ಹೊಲದಲ್ಲಿ ಬೆಳೆ ಚನ್ನಾಗಿದ್ದರೆ, ವಾರದ ಹಿಂದೆ ಬಿತ್ತಿದ ಹೊಲದಲ್ಲಿ ಪೈರು ಸಾಲು ಹರಿದಿವೆ.<br><br></p>.<div><blockquote>ಜೂನ್ ಎರಡನೇ ವಾರದಲ್ಲಿ ಬಿತ್ತನೆ ಮಾಡಿದ್ದು ಈಗ ಬೆಳವಣಿಗೆ ಹಂತದಲ್ಲಿದೆ. ತೇವಾಂಶ ನಿರ್ವಹಣೆ ಮತ್ತು ಕಳೆ ನಿಯಂತ್ರಣಕ್ಕೆ ಎಡೆ ಹೊಡೆಯುತ್ತಿದ್ದೇವೆ.</blockquote><span class="attribution">- ಗೋಪಾಲ ಜಾಧವ , ರೈತ ಕಲಭಾವಿ ತಾಂಡಾ</span></div>.<div><blockquote>ರೈತರು ತಮ್ಮ ಹೊಲದಲ್ಲಿ ಬಿತ್ತಿದ ಬೆಳೆಗಳಿಗೆ ವಿಮೆ ನೋಂದಾಯಿಸಲು ಜುಲೈ 31 ಕೊನೆಯ ದಿನವಾಗಿದೆ. ಹವಾಮಾನದಲ್ಲಿ ಏರುಪೇರಾಗುತ್ತಿರುವುದರಿಂದ ವಿಮೆ ಮಾಡಿಸುವುದು ಸೂಕ್ತ </blockquote><span class="attribution">-ವೀರಶೆಟ್ಟಿ ರಾಠೋಡ್, ಕೃಷಿ ಸಹಾಯಕ ನಿರ್ದೇಶಕ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>